Thursday, April 25, 2024
spot_imgspot_img
spot_imgspot_img

ವಿಟ್ಲ: ಬೆಳ್ಳಿ ಹಬ್ಬ ಸಂಭ್ರಮೋತ್ಸವದಲ್ಲಿರುವ ಬಿಲ್ಲವ ಸಂಘದ ಆಶ್ರಯದಲ್ಲಿ ಕ್ರೀಡೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಬೆಳ್ಳಿ ಹಬ್ಬ ಸಂಭ್ರಮೋತ್ಸವದಲ್ಲಿರುವ ವಿಟ್ಲ ಬಿಲ್ಲವ ಸಂಘದ ಆಶ್ರಯದಲ್ಲಿ, ಬಿಲ್ಲವ ಸಂಘ ಮಹಿಳಾ, ಯುವವಾಹಿನಿ ಘಟನ ಸಹಭಾಗಿತ್ವದಲ್ಲಿ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡೋತ್ಸವ ನಡೆಯಿತು.

ವಿಟ್ಲ ವಲಯ ಬಿಲ್ಲವ ಸಂಘದ ವ್ಯಾಪ್ತಿಗೆ ಬರುವ 14 ಗ್ರಾಮಗಳ ಸಮಾಜ ಬಾಂಧವರಿಗೆ ನಡೆದ ಕ್ರೀಡೋತ್ಸವವನ್ನು ಬೆಳ್ಳಿ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಡಾ.ಗೀತ ಪ್ರಕಾಶ್ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಬಳಿಕ ಪುರುಷ, ಮಹಿಳಾ ಹಾಗೂ ಮಕ್ಕಳ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಹೆಚ್, ವಿಟ್ಲ ಯುವವಾಹಿನಿ ಘಟಕದ ಅಧ್ಯಕ್ಷ ಯಶವಂತ ನಿಡ್ಯ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ನಿಡ್ಯ, ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ದಾಸಪ್ಪ ಪೂಜಾರಿ ನೆಕ್ಕಿಲಾರು, ಜಗನ್ನಾಥ್ ಸಾಲಿಯಾನ್, ಕುಕ್ಕಾಜೆ ಕಾಳಿಕಾಂಬ ಶ್ರೀಕೃಷ್ಣ ಗುರೂಜಿ, ಬಿಲ್ಲವ ಸಂಘದ ಪದಾಧಿಕಾರಿಗಳಾದ ಜಗದೀಶ್ ಪಾಣೆಮಜಲು, ಚಂದ್ರಹಾಸ ಸುವರ್ಣ, ರಮೇಶ್ ಆರ್.ಎಸ್, ರಾಘವ ಪೂಜಾರಿ, ಸಂಜೀವ ಪೂಜಾರಿ ಎಂ.ಎಸ್, ಬಿಲ್ಲವ ಮಹಿಳಾ ಘಟಕದ ಪದಾಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವನಾಥ ರಾಥೋಡ್, ಪ್ರಕಾಶ್ ಬಳಂತಿಮೊಗರು, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ರಾಜೇಶ್ ವಿಟ್ಲ, ರಾಷ್ಟ್ರೀಯ ಕಬಡ್ಡಿ ಕ್ರೀಡಾಳು ವಿಶ್ವರಾಜ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

astr
- Advertisement -

Related news

error: Content is protected !!