Sunday, May 5, 2024
spot_imgspot_img
spot_imgspot_img

ವಿಟ್ಲ ಮಂಗೇಶ್ ಭಟ್ಟರಿಗೆ ಯಕ್ಷಸನ್ಮಾನ

- Advertisement -G L Acharya panikkar
- Advertisement -

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವಿಟ್ಲ ಘಟಕದ ತೃತೀಯ ವರ್ಷದ ವಾರ್ಷಿಕೋತ್ಸವ ದಿನಾಂಕ 1.5.2023 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.

ಈ ಸಂದರ್ಭದಲ್ಲಿ 2023ನೇ ಸಾಲಿನ ಘಟಕದ ಕಲಾ ಗೌರವ ಪುರಸ್ಕಾರ ಖ್ಯಾತ ಹವ್ಯಾಸಿ ಯಕ್ಷಗಾನ ವೇಷಧಾರಿ, ಅರ್ಥದಾರಿ, ನಾಟಕ ನಿರ್ದೇಶಕರು ಮತ್ತು ಕಲಾವಿದರು, ಚಲನಚಿತ್ರ ನಟರು, ಧಾರ್ಮಿಕ ಉಪನ್ಯಾಸಕರಾಗಿದ್ದುಕೊಂಡು, “ಕ್ರಿಯಾಶೀಲತೆಯೇ ಯಶಸ್ಸಿನ ಕೀಲಿ ಕೈ” ಎಂಬುದರಲ್ಲಿ ವಿಶ್ವಾಸವಿರಿಸಿದ ವಿಟ್ಲದ ಹಿರಿಯ ಕಲಾವಿದ ಶ್ರೀ ಮಂಗೇಶ್ ಭಟ್ ರವರಿಗೆ ನೀಡಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕರಾದ ಸತೀಶ್ ಶೆಟ್ಟಿ ಪಟ್ಲ,ಘಟಕದ ಹಿರಿಯ ಸಲಹೆಗಾರ ಮಾರಪ್ಪ ಶೆಟ್ಟಿ ಬೈಲುಗುತ್ತು ಹಾಗೂ ಸುಂದರಶೆಟ್ಟಿ ಚೆಂಬರಡ್ಕ, ಧಾರ್ಮಿಕ ಮುಖಂಡ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕಲಾವಿದ ವಿದೇಶಿ ಸಂಘಟಕ ಮೋಹನದಾಸ್ ರೈ ಎರುಂಬು, ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಜಯರಾಮ ರೈ ಜತೆಗಿದ್ದು ಶುಭ ಹಾರೈಸಿದರು.ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕಾರ್ಯದರ್ಶಿ ಡಾ.ಪೂವಪ್ಪ ಶೆಟ್ಟಿ ಅಳಿಕೆ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

- Advertisement -

Related news

error: Content is protected !!