Sunday, May 5, 2024
spot_imgspot_img
spot_imgspot_img

ವಿಟ್ಲ: ರಾಜ್ಯ ಮಟ್ಟದ ಕರಾಟೆ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸನ್ಮಯ ಐ.ಕೆ

- Advertisement -G L Acharya panikkar
- Advertisement -

ವಿಟ್ಲ : ಅಕ್ಟೋಬರ್ 10 ಮತ್ತು 11ರಂದು ಶಿವಮೊಗ್ಗದಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕರಾಟೆ ಕ್ರೀಡಾ ಕೂಟದಲ್ಲಿ ಸನ್ಮಯ ಐ.ಕೆ ಇವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗಳಿಸಿದ್ದಾರೆ.

ಈಶ್ವರಪ್ರಸಾದ್ ಯು.ಎಸ್ ಮತ್ತು ಮಧುರ ಐ.ಪಿ ದಂಪತಿಗಳ ಪುತ್ರಿಯಾಗಿರುವ ಸನ್ಮಯ ಇವರು ಪ್ರಸ್ತುತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ಸತೀಶ್ ಮತ್ತು ದಿನೇಶ್ ಕುಲಾಲ್ ನೀರ್ಕಜೆ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸತೀಶ್ ಮತ್ತು ದಿನೇಶ್ ಕುಲಾಲ್ ಇವರು ನೀರ್ಕಜೆ ಹಾಗೂ ಕಾಶಿಮಠದಲ್ಲಿ ತರಬೇತಿ ನೀಡುತ್ತಿದ್ದು ಆಸಕ್ತರು ಇವರಲ್ಲಿ ತರಬೇತಿ ಪಡೆಯಬಹುದು. ಇಲ್ಲಿ ಶಿಟೊ ರಿಯೊ ಶೈಲಿ ಬೋಧನಾ ತರಬೇತಿಗಳು ನಡೆಯುತ್ತದೆ.

- Advertisement -

Related news

error: Content is protected !!