ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಾಗೂ ದಸರಾ ನಿಮಿತ್ತ ಶ್ರೀ ಪಾಂಡುರಂಗ ವಿಠಲ ಭಜನಾ ಮಂದಿರ ವಿಟ್ಲ ಇದರ ಮುಕ್ತೇಸರ ಹಾಗೂ ಅರ್ಚಕ ಕೀರ್ತನ್ ಕೆದಿಲಾಯರವರು ಕೊಡ ಮಾಡಿದ ವಿಟ್ಲ ದೇವಸ್ಥಾನ ರಸ್ತೆಯ ಮಂದಿರದ ಮುಂಭಾಗದಲ್ಲಿ ವಿಟ್ಲದ ಹೃದಯ ಭಾಗವಾದ ನಾಲ್ಕು ಮಾರ್ಗದ ಭಾಗದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ, ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮವನ್ನು ವಿಟ್ಲ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಎಚ್ ಇ ಯವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿ ಸಿ ಕ್ಯಾಮೆರಾವನ್ನು ನೀಡಿದ ಕೀರ್ತನ್ ಕದಿಲಾಯ ,ಲಯನ್ಸ್ ಕ್ಲಭ್ ವಿಟ್ಲ ಸಿಟಿಯ ಅಧ್ಯಕ್ಷ ಶ್ರೀ ಬಿ ಸಂದೇಶ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷರಾದ ಶ್ರೀಸುದರ್ಶನ್ ಪಡಿಯಾರ್, ಗೈಡಿಂಗ್ ಲಯನ್ ಹಾಗೂ ಉದ್ಯಮಿ ಶ್ರೀ ಸತೀಶ್ ಕುಮಾರ್ ಆಳ್ವ, ಹಾಗೂ ಕ್ಲಬ್ ನ ಸಕ್ರಿಯ ಸದಸ್ಯರುಗಳಾದ, ಜಯರಾಮ್ ಬಲ್ಲಾಳ್, ಸದಾನಂದ ಗೌಡ , ಮೋಹನ್ ಕಟ್ಟೆ, ಧರ್ಣಪ ಗೌಡ ಬನ, ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನೆ ಮಾಡಿ ಮಾತನಾಡಿದ ಇನ್ಸ್ಪೆಕ್ಟರ್ ನಾಗರಾಜ್ ರವರು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯು ವಿಟ್ಲ ಭಾಗದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಹೆಸರುವಾಸಿಯಾಗಿದೆ ,ಇನ್ನು ಮುಂದೆಯೂ ಸಮಾಜಸೇವೆಯಲ್ಲಿ ನಮ್ಮ ಸಹಕಾರವನ್ನು ಕೋರಿದರು. ಇದೇ ರೀತಿ ಸಮಾಜದ ಒಳಿತಿಗೆ ಕೆಲಸಗಳನ್ನು ಮಾಡುತ್ತಾ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಉತ್ತುಂಗ ಶಿಖರಕ್ಕೆ ಏರಲಿ ಎಂದು ಹಾರೈಸಿದರು