ವಿಟ್ಲ: ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ ವಿಟ್ಲ-2023 ಕಾರ್ಯಕ್ರಮವು ಫೆ. 12ರಂದು ಬೆಳಿಗ್ಗೆ 9.00ರಿಂದ ಸಂಜೆ 5.30ರವರೆಗೆ ಸುವರ್ಣ ರಂಗ ಮಂದಿರ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಆದರ್ಶ ಚೊಕ್ಕಾಡಿ ನೆರವೇರಿಸಲಿದ್ದು, ಸಭಾ ಅಧ್ಯಕ್ಷತೆಯನ್ನು ಕೃಷ್ಣಯ್ಯ ಕೆ. ವಿಟ್ಲ, ಅರಮನೆ ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ಪದ್ಮಶ್ರೀ ಭಟ್ ನಿಡ್ಡೋಡಿ ಮಾಡಲಿದ್ದಾರೆ.
ಅತಿಥಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, RK ಕಲಾ ಸಂಸ್ಥೆಯ ನಿರ್ದೇಶಕ ರಾಜೇಶ್ ವಿಟ್ಲ, ಸುಧೀರ್ ನಾಯ್ಕ್ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಸಾಣೂರು ಅರುಣ್ ಶೆಟ್ಟಿಗಾರ್, ಡಾ. ಶೇಖರ ಅಜೆಕಾರು,ವಿಜಯ್ ಕುಮಾರ್ ಜೈನ್, ದೇವಿಪ್ರಸಾದ್, ದೀನ್ರಾಜ್ ಕೆ, ಬಸವರಾಜ್ ಮಂತ್ರಿ, ಅಭಿಷೇಕ್ ಶೆಟ್ಟಿ ಐಕಳ, ಪ್ರಸಾದ್ ನಾಯಕ್ ಉಡುಪಿ, ಶ್ರೀನಿವಾಸ ಬಜಪೆ ಉಪಸ್ಥಿತಿ ಇರಲಿದೆ.
ಕಾರ್ಯಕ್ರಮದ ನಿರೂಪಣೆಯನ್ನು ರಾಧಾಕೃಷ್ಣ ಎರುಂಬು, ಕು| ಶ್ರೇಯಾ ಎಂ.ಜಿ ನೆರವೇರಿಸಲಿದ್ದಾರೆ.