Saturday, April 27, 2024
spot_imgspot_img
spot_imgspot_img

ವಿಟ್ಲ: ವೀರಕಂಬ ಗ್ರಾಮ ಮತ್ತು ಕೆಲಿಂಜ ಪಾಲ್ತಿಮಾರ್‌ ಗ್ರಾಮಸ್ಥರಿಂದ ರಸ್ತೆ ಕಾಂಕ್ರೀಟೀಕರಣಕ್ಕೆ ಮನವಿ

- Advertisement -G L Acharya panikkar
- Advertisement -

ವಿಟ್ಲ: ವೀರಕಂಬ ಗ್ರಾಮ ಮತ್ತು ಕೆಲಿಂಜ ಪಾಲ್ತಿಮಾರ್‌ ಗ್ರಾಮಸ್ಥರಿಂದ ಬೆಂಜತ್ತಿಮಾರಿನ ಕೆಲಿಂಜ-ಪಾಲ್ತಿಮಾ‌‌‌ರ್‌ ರಸ್ತೆ ಕಾಂಕ್ರೀಟೀಕರಣಕ್ಕೆ ಗ್ರಾಮ ಪಂಚಾಯತ್‌ಗೆ ಮನವಿ ನೀಡಿದ್ದಾರೆ.

ಕಾರಣಿಕ ಕ್ಷೇತ್ರ ಶ್ರೀ ಉಳ್ಳಾಲ್ತಿ ದೇವಸ್ಥಾನಕ್ಕೆ ವರ್ಷಂಪ್ರತಿ ಮೆಚ್ಚಿ ಜಾತ್ರೆಗೆ ಬೆಂಜತ್ತಿಮಾರಿನಿಂದ ಕೆಲಿಂಜ ಪಾಲ್ತಿಮಾರ್‌ ರಸ್ತೆಯ ಮೂಲಕ ಭಂಡಾರ ಇದೇ ಮಾರ್ಗವಾಗಿ ಉಳ್ಳಾಲ್ತಿ ದೇವಸ್ಥಾನಕ್ಕೆ ತಲುಪುತ್ತದೆ.

ಪ್ರತಿದಿನ ಶಾಲಾಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಈ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಅಲ್ಲದೇ ಈ ಸಂಪರ್ಕ ರಸ್ತೆಯು ಪಾಲ್ತಿಮಾರು, ಮಾಡದಾರು, ಪುಂಡಿಕಾಯಿ, ನಾಲ್ಕುಕಳಸೆ, ಸುಳ್ಯ, ವಳಕುಡ್ಡೆಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುತ್ತದೆ. ರಸ್ತೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಹನದ ಮೂಲಕ ಸಂಚಾರ ಮತ್ತು ನಡೆದುಕೊಂಡು ಹೋಗಲು ಕಷ್ಟಕರವಾಗಿದೆ. ಆದ್ದರಿಂದ ಸಂಪರ್ಕ ರಸ್ತೆಗೆ ಹಣ ಮಂಜೂರು ಮಾಡಿ ರಸ್ತೆಗೆ ಕಾಂಕ್ರೀಟಿಕರಣ ಮಾಡಬೇಕೆಂದು ಊರಿನ ನಾಗರಿಕರು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಪಿಡಿಓ ನಿಶಾಂತ್‌, ಪಂಚಾಯತ್‌ ಸದಸ್ಯರಾದ ಜಯಪ್ರಸಾದ್‌, ಸಂದೀಪ್‌ ಮತ್ತು ಪಾಲ್ತಿಮಾರ್‌ ಗ್ರಾಮಸ್ಥರಾದ ಅರುಣೋದಯ ಕೆ.ಎಲ್‌, ಜಯನಾಥ ಗೌಡ, ದೇವಪ್ಪ, ಜನಾರ್ದನ, ಅನಂತೇಶ್‌, ಪ್ರಜ್ವಲ್‌, ಹೇಮಂತ್‌ ಉಪಸ್ಥಿತರಿದ್ದರು.

- Advertisement -

Related news

error: Content is protected !!