- Advertisement -
- Advertisement -
ಮಿತ್ತೂರು: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತೂರು ಶಾಲೆ ಬಳಿ ಬಳಿ ಯಾರೋ ಅಪರಿಚಿತರು ಕಸ ಎಸೆದು ಹೋಗುತ್ತಿದ್ದವರ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿ ಬಂದಿದೆ. ಸ್ವಚ್ಛತೆ ಕಾಪಾಡುವ ದೃಷ್ಠಿಯಿಂದ ಶಾಲಾ ಪರಿಸರದಲ್ಲಿದ್ದ ಕಸವನ್ನು ಸ್ಥಳೀಯರು ಸೇರಿಕೊಂಡು ಸ್ವಚ್ಛಮಾಡಿದ್ದರೆ.
ನಿನ್ನೆ ರಾತ್ರಿ ಕೇರಳ ನೋಂದಾವಣೆ ಹೊಂದಿದ್ದ ಕಾರಿನಲ್ಲಿ ಬಂದ ವ್ಯಕ್ತಿ ಕಸ ಎಸೆದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಸೇರಿಕೊಂಡು ಆತನನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಆ ವೇಳೆ ನಾನು ಮಾಣಿಯಿಂದ ಬಂದಿದ್ದೇನೆ. ಪೇರಮೊಗೇರು ಕಡೆ ಹೋಗುತ್ತಿದ್ದು ದಾರಿ ತಪ್ಪಿ ಈ ರೋಡ್ನಲ್ಲಿ ಬಂದಿದ್ದೇನೆ, ಕ್ಷಮಿಸಿ ಎಂದು ಹೇಳಿ ಆತ ಸ್ಥಳದಿಂದ ತೆರಳಿದ್ದಾನೆ.
ಇಂತಹ ಘಟನೆ ಈ ಪರಿಸರದಲ್ಲಿ ಪದೇ ಪದೇ ನಡೆಯುತ್ತಿದ್ದು, ಕಸ ಎಸೆದು ಹೋಗುವವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿ ಬಂದಿದೆ.
- Advertisement -