- Advertisement -
- Advertisement -
ವಿಟ್ಲ ಹಾಲು ಉತ್ಪಾದಕರ ಸಂಘದ ಹಾಲು ಪರೀಕ್ಷಕ ದಯಾನಂದ ನಾಯ್ಕ ಇವರ ಬೀಳ್ಕೊಡುಗೆ ಕಾರ್ಯಕ್ರಮವು ಸಂಘದ ಕಟ್ಟಡ – ರಾಕೇಶ್ ಇವರು ನಡೆಸುತ್ತಿರುವ ನೃತ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು.
ದಯಾನಂದ ಇವರು ಸಂಘದಲ್ಲಿ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಶಾಲು ಹೊದಿಸಿ, ಫಲ, ತಾಂಬೂಲ ಮತ್ತು ಉಂಗುರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೆ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲೋಕನಾಥ ಶೆಟ್ಟಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ್, ಗೋಪಾಲ ಎಂ, ಮೋಹನ ಕಾಯರ್ಮಾರ್, ಲೋಕನಾಥ ಶೆಟ್ಟಿ, ಆನಂದ ಶೆಟ್ಟಿ, ಜಯರಾಂ ಬಲ್ಲಾಳ್, ಬಾಲಚಂದ್ರ ನಾಯಕ್, ಗಣೇಶ್ ರೈ, ಪುಷ್ಪರಾಜ್, ಗಿರಿಜ, ರೇವತಿ, ವಿಟ್ಲ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಸಹಾಯಕ ಜಗದೀಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
- Advertisement -