ವಿಟ್ಲ: ಗಂಡ ಹೆಂಡತಿಯ ನಡುವೆ ಮನಸ್ತಾಪ ಉಂಟಾಗಿ ತವರು ಸೇರಿದ್ದ ಯುವತಿಯ ಮನೆಗೆ ಬಂದು ಗಲಾಟೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಪುಣಚ ಗ್ರಾಮದ ಅರೀಪೆಕಟ್ಟೆ ಎಂಬಲ್ಲಿ ನಡೆದಿದೆ. ಈ ಕುರಿತಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗೌಸ್ ಜಲಾಲುದ್ದೀನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಣಚ ಗ್ರಾಮದ ಅರೀಪೆಕಟ್ಟೆಯ ಫಾತಿಮತ್ ಬುಶ್ರಾ ರವರನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದಿನ್ ಎಂಬಾತನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಬಳಿಕ ಇತ್ತೀಚೆಗೆ ಸುಮಾರು ಒಂದು ತಿಂಗಳಿನಿAದ ಮನಸ್ತಾಪ ಉಂಟಾಗಿ ತವರು ಮನೆಯಲ್ಲೇ ಬುಶ್ರಾ ಇದ್ದರು. ಡಿ, 18 ರ ಮಧ್ಯಾಹ್ನ ಮನೆಗೆ ಬಂದ ಗೌಸ್ ಜಲಾಲುದ್ದಿನ್ ಬಾಟ್ಲಿಯಲ್ಲಿ ಇಂಧನವನ್ನು ತಂದು ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ.
ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದ ಮನೆಯಲ್ಲಿದ್ದ ಸೋಫಾ ಸೆಟ್ ಗೆ ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆಯು ಹಬ್ಬಿ ಅಲ್ಲಿದ್ದ ಸೋಫಾ ಸೆಟ್, ಧರ್ಮಗ್ರಂಥ, ಹೊದಿಕೆಗಳು, ಅಕ್ಕಿ, ತೆಂಗಿನಕಾಯಿ ಹೊತ್ತಿ ಉರಿದು ಸುಮಾರು ಹತ್ತು ಸಾವಿರ ನಷ್ಟ ಉಂಟಾಗಿದೆ. ಈ ವೇಳೆ ಫಿರ್ಯಾದುದಾರರು ಇದನ್ನು ಆಕ್ಷೇಪಿಸಲು ಬಂದಾಗ ಕೈಯಿಂದ ಹೊಡೆದು ದೂಡಿ ಹಾಕಿದ ಪರಿಣಾಮ ಸೊಂಟದ ಬಲಭಾಗಕ್ಕೆ, ಬಲಕಾಲಿನ ತೊಡೆಗೆ, ಬಲ ಕೈಗೆ ಗುದ್ದಿದ ತರಹ ನೋವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.