- Advertisement -
- Advertisement -
ಕಲ್ಲಡ್ಕ-ಸಾರಡ್ಕ ಅಂತಾರಾಜ್ಯ ಹೆದ್ದಾರಿಯ ವಿಟ್ಲದ ಕಾಶಿಮಠ ಎಂಬಲ್ಲಿ ಮರ ಬಿದ್ದು ಮುಂಜಾನೆ ವೇಳೆ ಕೆಲಹೊತ್ತು ಸಂಚಾರಕ್ಕೆ ಅಡೆತಡೆ ಉಂಟಾದ ಘಟನೆ ನಡೆದಿದೆ.
ಬೆಳಿಗ್ಗೆ 5.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ವಿಟ್ಲ-ಕಾಸರಗೋಡು, ಕನ್ಯಾನ, ಉಪ್ಪಳ ಕಡೆಗಳಿಗೆ ತೆರಳುವ ವಾಹನ ಸಾಲಗಟ್ಟಿ ನಿಂತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಯೋಗೀಶ್ ಮತ್ತು ದಯಾನಂದ ಕಾಶಿಮಠ ನೇತೃತ್ವದ ತಂಡ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.
- Advertisement -