- Advertisement -
- Advertisement -
ವಿಟ್ಲ: ಅಂಗನವಾಡಿ ವಠಾರದಲ್ಲಿ ಖಾಸಗಿ ವ್ಯಕ್ತಿಯ ಆವರಣಗೋಡೆಯಿಲ್ಲದ 50 ಅಡಿ ಆಳದ ಪಾಳು ಬಾವಿಗೆ ಕರುವೊಂದು ಬಿದ್ದ ಘಟನೆ ನಡೆದಿದೆ.
ವಿಟ್ಲ ಪಟ್ಟಣ ಪಂಚಾಯತ್ನ 13ನೇ ವಾರ್ಡ್ನ ಒಕ್ಕೆತ್ತೂರು ಊರ್ದಗಂಡಿ ಅಂಗನವಾಡಿ ಸಮೀಪ ಈ ಘಟನೆ ನಡೆದಿದೆ. ಈ ಹಿಂದೆ ಐದಾರು ಮೂಕ ಪ್ರಾಣಿಗಳನ್ನು ಬಾವಿ ಬಲಿ ಪಡೆದಿತ್ತು. ಆದರೂ ಈ ಬಗ್ಗೆ ಖಾಸಗಿ ವ್ಯಕ್ತಿ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ.
- Advertisement -