- Advertisement -
- Advertisement -
ವೀರಕಂಭ ಗ್ರಾಮದ ಸೀನಾಜೆ ಕಂಪದಬೈಲು ಶೀನಾಜೆ, ದಿವಾಣ ಸುತ್ತಮುತ್ತ ಗುಡ್ಡದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಸುತ್ತುವರಿದು ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾದ ಘಟನೆ ನಡೆದಿದೆ. ಘಟನೆಯಲ್ಲಿ ಗುಡ್ಡದ ಸಮೀಪವಿರುವ ಕುಟುಂಬವೊಂದರ ರಬ್ಬರ್ ತೋಟಕ್ಕೆ ಹಾನಿಯಾಗಿದ್ದು, ಜೊತೆಗೆ ಪಂಚಾಯತ್ ಅಳವಡಿಸಿದ ಪೈಪ್ ಲೈನ್ಗಳಿಗೆ ಹಾನಿಯಾಗಿದೆ. ಗುಡ್ಡದ ಹಲವು ಭಾಗ ಸುಟ್ಟು ಮರಗಿಡಗಳಿಗೆ ಹಾನಿಯಾಗಿದೆ. ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವು ಗುಡ್ಡಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಘಟನಾ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಕೂಡಲೇ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -