ವಿಟ್ಲ: ಶರಣಂ ನಾಸಿಕ್ ಬ್ಯಾಂಡ್ ಕುದ್ದುಪದವು ವಿಟ್ಲ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದಿವ್ಯಶಕ್ತಿ ಯುವಕ ಮಂಡಲ (ರಿ) ಕುದ್ದುಪದವು ಇದರ ವಠಾರದಲ್ಲಿ ಕಾರ್ಯಕ್ರಮ ನಡೆಯಿತು. ಭಾರತೀಯ ಜನತಾ ಪಕ್ಷದ ಕ್ಷೇಮ ಶಕ್ತಿ ಕೇಂದ್ರದ ಪ್ರಮುಖ್ ರಾಧಾಕೃಷ್ಣ ಶೆಟ್ಟಿ, ಚೆಲ್ಲಡ್ಕ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವ್ಯಶಕ್ತಿ ಯುವಕ ಮಂಡಲ (ರಿ.) ಕುದ್ದುಪದವು ಇದರ ಗೌರವಾಧ್ಯಕ್ಷ ರಾಜೀವ ಭಂಡಾರಿ ವಹಿಸಿದ್ದರು. ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯತ್ನ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಕೇಪು ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ರಾಘವ ಮಣಿಯಾಣಿ, ಕೇಪು ಗ್ರಾಮ ಪಂಚಾಯತ್ನ ಸದಸ್ಯ ಜಗಜೀವನ್ರಾಮ್ ಶೆಟ್ಟಿ, ಶ್ರೀ ಮಹಮ್ಮಾಯಿ ಮರಾಠಿ ಸಂಘ (ರಿ.) ಕುದ್ದುಪದವು ಇದರ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ, ದಿವ್ಯಶಕ್ತಿ ಯುವಕ ಮಂಡಲ (ರಿ.) ಕುದ್ದುಪದವು ಇದರ ಅಧ್ಯಕ್ಷ ಸತೀಶ ಪಾಟಾಳಿ, ದಿವ್ಯಶಕ್ತಿ ಯುವತಿ ಮಂಡಲ ಕುದ್ದುಪದವು ಇದರ ಅಧ್ಯಕ್ಷೆ ಶೀಲಾ ಕುಮೇರು, ಹಿಂದೂ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ಶರಣಂ ನಾಸಿಕ್ ಬ್ಯಾಂಡ್ನ ಮುಖ್ಯಸ್ಥ ವಾಸು ನಾಯ್ಕ್ ಸೇರಿದ್ದರು.
ಈ ವೇಳೆ ಶರಣಂ ನಾಸಿಕ್ ಬ್ಯಾಂಡ್ ಅವರ ತಂಡದಿಂದ ಪ್ರಾತ್ಯಕ್ಷಿಕೆ ನಡೆಯಿತು. ಈ ತಂಡದಲ್ಲಿ ಈಗಾಗಲೇ ೩೫ ರಿಂದ ೪೦ ಮಂದಿ ಸದಸ್ಯರಿದ್ದು ತನ್ನ ಪ್ರತಿಭೆಗಳನ್ನು ತೋರ್ಪಡಿಸಲು ಸಿದ್ಧವಾಗಿದೆ. ಈ ತಂಡ ಸದುದ್ದೇಶದಿಂದ ಪ್ರಾರಂಭಗೊಂಡಿದ್ದು ತಂಡದಲ್ಲಿ ಒಂದಂಶ ದುಡಿಮೆಯನ್ನು ಬಡವರ ಪಾಲಿಗೆ ಮೀಸಲಿರಿಸಲು ಅಣಿಯಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ.
ಕಾರ್ಯಕ್ರಮಗಳಿಗೆ ಸಂಪರ್ಕಿಸಿ: ಶರಣಂ ನಾಸಿಕ್ ಬ್ಯಾಂಡ್, ಕುದ್ದುಪದವು ವಿಟ್ಲ
9606395114, 8197723591