ದಾವಣಗೆರೆ: ಪತ್ನಿಯ ಶೀಲ ಶಂಕಿಸಿ ಗರ್ಭಿಣಿಯಾಗಿದ್ದ ಪತ್ನಿಯನ್ನು ಪತಿ ಉಸಿರುಗಟ್ಟಿಸಿ ಕೊಲೆ ಮಾಡಿ, ದಟ್ಟ ಅರಣ್ಯದ ಹಳ್ಳದಲ್ಲಿ ಹಳ್ಳ ತೋಡಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಚಂದ್ರಕಲಾ(20) ಅವರನ್ನು ಚನ್ನಗಿರಿ ತಾಲೂಕಿನ ಗಂಗಗೊಂಡನ ಹಳ್ಳಿಯ ಮೋಹನ್ ಕುಮಾರ್ ಗೆ (24) ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ತುಂಬು ಗರ್ಭಿಣಿಯಾಗಿದ್ದ ಚಂದ್ರಕಲಾ ಇದ್ದಕ್ಕಿದ್ದಂತೆ ಅಕ್ಟೊಬರ್ 8ಕ್ಕೆ ಕಾಣೆಯಾಗಿದ್ದಾಳೆ. ಪತ್ನಿ ಕಾಣೆಯಾಗಿದ್ದಳೆಂದು ಮೋಹನ್ ಕುಮಾರ್ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ನಿಮ್ಮ ಮಗಳು ಓಡಿ ಹೋಗಿದ್ದಾಳೆ ಎಂದು ಕಟ್ಟುಕಥೆ ಕಟ್ಟಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಚಂದ್ರಕಲಾ ಪೋಷಕರು ಮೋಹನ್ ಕಡೆಯಿಂದ ಕೇಸ್ ಕೊಡಿಸಿದ್ದಾರೆ
ದೂರು ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ಚಂದ್ರಕಲಾಗಾಗಿ ಹುಡುಕಿದ್ದಾರೆ. ಸಿಗದ ಕಾರಣ ಮೋಹನ್ನ ವಿಚಾರಣೆ ಮಾಡಿದಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ದಟ್ಟಾರಣ್ಯದಲ್ಲಿ ದಫನ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.