- Advertisement -
- Advertisement -
ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು, ಈ ವೇಳೆ ಪೊಲೀಸ್ ಠಾಣೆಗೆ ಅವಸ್ಥೆ ಕಂಡು ಗೃಹ ಸಚಿವರು ಗರಂ ಆದ ಘಟನೆ ನಡೆದಿದೆ.
ಪೊಲೀಸ್ ಠಾಣೆಯ ಟರ್ಪಾಲ್ ಹೊದಿಕೆ ನೋಡಿದ ಗೃಹ ಸಚಿವರು ಕೋಪಗೊಂಡಿದ್ದು, ಹೊಸ ಠಾಣೆ ಕಟ್ಟಡ ಕಾಮಗಾರಿ ವಿಳಂಬಕ್ಕೆ, ಇಂಜಿನಿಯರ್ ಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು. ತಕ್ಷಣ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.
2017ರಲ್ಲೇ ಸರ್ಕಾರ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ 1.23 ಕೋಟಿ ಮೀಸಲಿಟ್ಟಿದೆ. ಟೆಂಡರ್ ಆದರೂ ಹಣ ಸಾಕಾಗಲ್ಲ ಅಂತ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು ಎನ್ನಲಾಗಿದೆ. ಠಾಣೆಯ ಈ ಅವಸ್ಥೆ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.
- Advertisement -