- Advertisement -
- Advertisement -
ಸುಬ್ರಹ್ಮಣ್ಯ: ಮನೆಕೆಲಸಕ್ಕೆ ಬಂದಿದ್ದ ವ್ಯಕ್ತಿಗಳಿಬ್ಬರು ಮನೆಯಲ್ಲಿದ್ದ ದಂಪತಿಯ ಮೇಲೆ ಆಕ್ರಮಣ ನಡೆಸಿ ಕೊಲೆ ಯತ್ನಕ್ಕೆ ಮುಂದಾದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಿಂದ ವರದಿಯಾಗಿದೆ.
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ವಿಶ್ವನಾಥ್ ಮತ್ತು ಗಾಯತ್ರಿ ದಂಪತಿ ಮನೆಗೆ ಕೆಲಸಕ್ಕೆ ಬಂದವರು ದಂಪತಿಯ ಮೇಲೆ ಆಕ್ರಮಣ ನಡೆಸಿರುವುದಾಗಿದೆ. ಈ ವೇಳೆ ಮನೆಯವರು ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಮನೆಯವರು ಓಡಿ ಬಂದ ಕಾರಣ ಜೀವ ಹಾನಿ ತಪ್ಪಿದೆ ಎನ್ನಲಾಗಿದೆ.
ಘಟನೆ ಸಂಬಂಧಿಸಿ ವರದರಾಜ್ ಮತ್ತು ಸೈಫನ್ ಎಂಬುವರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
- Advertisement -