Friday, April 26, 2024
spot_imgspot_img
spot_imgspot_img

ಸುಳ್ಯ: ಬೈ ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಲಾರಿ ಬೆಂಕಿಗಾಹುತಿ

- Advertisement -G L Acharya panikkar
- Advertisement -

vtv vitla

ಸುಳ್ಯ: ಬೈ ಹುಲ್ಲು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ವಿದ್ಯುತ್ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ದೊಡ್ಡತೋಟ ಎಂಬಲ್ಲಿ ನಡೆದಿದೆ.

ಸಕಲೇಶಪುರದಿಂದ ಮುಳ್ಳೇರಿಯಕ್ಕೆ ಬೈಹುಲ್ಲನ್ನು ಸಾಗಿಸುವ ಲಾರಿ ಯೊಂದು ದೊಡ್ಡತೋಟ ಕಂದಡ್ಕದ ಮಧ್ಯೆ ಕಾಸಿನಗೋಡ್ಲು ತಿರುವು ದಾಟುತ್ತಿದ್ದಂತೆ ಎದುರಿನಿಂದ ಬಸ್ಸಿಗೆ ಸೈಡ್ ಕೊಡಲು ಹೋಗಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ತಗುಲಿದ್ದು ವಿದ್ಯುತ್ ವೈಯರ್ ಲಾರಿಯಲ್ಲಿದ್ದ ಬೈ ಹುಲ್ಲಿಗೆ ಸ್ಪರ್ಶಿಸಿ ಬೆಂಕಿ ತಗುಲಿದೆ.

ಲಾರಿಯಲ್ಲಿದ್ದ ಚಾಲಕ ಸತೀಶ್, ಮ್ಹಾಲಕ ರಾಜೇಶ್ ಹಾಗೂ ಇನ್ನೋರ್ವ ಪುಟ್ಟರಾಜು ಎಂಬವರು ಲಾರಿಯಿಂದ ಹೊರಗೆ ಬಂದು ಯಾವುದೇ ಗಾಯಗಳಿಲ್ಲದೇ ಅದೃಷ್ಟವಶಾತ್ ಪಾರಾದರು. ಹೈಟೆನ್ಶನ್ ಲೈನ್ ಬೈ ಹುಲ್ಲಿನ ಮೇಲೆ ಬಿದ್ದ ಪರಿಣಾಮ ಬೆಂಕಿ ಆವರಿಸಿ ಕೊಂಡು ಕ್ಷಣಮಾತ್ರದಲ್ಲಿ ಧಗಧಗನೆ ಉರಿಯಲಾರಂಭಿಸಿತು.

ಘಟನೆಯ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸುಮಾರು ಮೂರು ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಯ ಕೆನ್ನಾಲಗೆ ತುತ್ತಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ. ಸುಮಾರು 3ರಿಂದ 5 ಲಕ್ಷ ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ.

suvarna gold
- Advertisement -

Related news

error: Content is protected !!