- Advertisement -
- Advertisement -
ಸುಳ್ಯ : ಸುಳ್ಯದಿಂದ ಹಾಸನಕ್ಕೆ ವ್ಯಾಪಾರಕ್ಕೆಂದು ತೆರಳಿದ್ದ ಸುಳ್ಯದ ಜಯನಗರದ ಯುವಕನನ್ನು ರಾತ್ರಿ ವೇಳೆ ದರೋಡೆ ನಡೆಸಿರುವ ಘಟನೆ ನಡೆದಿದೆ.
ಯುವಕನ ಬಳಿಯಿಂದ ಬೆಲೆಬಾಳುವ ಮೊಬೈಲ್, ಹಣವನ್ನು ಅಪರಿಚಿತರು ದರೊಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರದೀಪ್, ಮಸಾಲೆ ಪದಾರ್ಥಗಳ ಲೈನ್ಸೇಲ್ಗೆ ತೆರಳಿದ್ದು, ಬಸ್ಸಿನಿಂದ ಇಳಿದು ರೂಂಗೆ ತೆರಳುತ್ತಿದ್ದ ವೇಳೆ ಅಪರಿಚಿತರ ತಂಡ ಚೂರಿ ತೋರಿಸಿ ಕೃತ್ಯ ಎಸಗಿದೆ. ಸುಮಾರು 20 ಸಾವಿರ ರೂ. ಮೌಲ್ಯದ ಮೊಬೈಲ್, ಕೈಯಲ್ಲಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಅವರು ಮಾಲಕರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -