- Advertisement -
- Advertisement -
ಬಾಗಲಕೋಟೆ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹುಟ್ಟುಹಬ್ಬದ ದಿನವೇ ಯುವಕನೊಬ್ಬ ದುರಂತ ಅಂತ್ಯ ಕಂಡ ಘಟನೆ ಗದ್ದನಕೇರಿ ತಾಂಡಾ ಸಮೀಪ ನಡೆದಿದೆ. ಜೊತೆಗಿದ್ದ ಸ್ನೇಹಿತನೂ ಸಾವನ್ನಪ್ಪಿದ್ದಾನೆ.
ನವನಗರದ ಸಂಗಮೇಶ (21) ಹಾಗೂ ಶಿರಗುಪ್ಪಿ ತಾಂಡಾದ ಕಿರಣ (21) ಮೃತ ದುರ್ದೈವಿಗಳು.
ನಿನ್ನೆ (ಡಿ.6) ಸಂಗಮೇಶ್ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸ್ನೇಹಿತ ಕಿರಣ್ ಜೊತೆ ಬೈಕ್ನಲ್ಲಿ ಬರುವಾಗ ಭೀಕರ ಅಪಘಾತ ಸಂಭವಿಸಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಲ್ಲಿ ಒಬ್ಬನ ದೇಹ ತುಂಡರಿಸಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
- Advertisement -