ವಿಟ್ಲ: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕರಿಂಕ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕರಿಂಕ ನೆಟ್ಲಮುಡ್ನೂರು ಅನಂತಾಡಿ ಇದರ ವತಿಯಿಂದ 13ನೇ ವರ್ಷದ ಶ್ರೀ ಶಾರದೋತ್ಸವವು ದಿನಾಂಕ 22-10-2023 ರಿಂದ 23-10-2023ರ ವರೆಗೆ ಕರಿಂಕ ಶ್ರೀ ದೇವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಪೆರಾಜೆ ಕೊಪ್ಪಳ ವೇ|ಮೂ| ಶ್ರೀ ಕೃಷ್ಣ ಕುಮಾರ ಇವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ದಿನಾಂಕ 22-10-2023ನೇ ರವಿವಾರ ಬೆಳಿಗ್ಗೆ ಗಂಟೆ 9 ಗಂಟೆಗೆ ಶಾರದಾ ಮೂರ್ತಿಯ ವಿಗ್ರಹ ಪ್ರತಿಷ್ಠೆ ಸಾಮೂಹಿಕ ಪ್ರಾರ್ಥನೆ, ಬಳಿಕ ದೀಪೋಜ್ವಲ, ಮಹಾಗಣಪತಿ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 3 ರಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 8.15ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ-ಕುಡ್ಲ ಅಭಿನಯದ ಕುತೂಹಲಭರಿತ ಹಾಸ್ಯಮಯ ತುಳು/ಕನ್ನಡ ನಾಟಕ ’ಪರಿಮಳ ಕಾಲನಿ’ ನಡೆಯಲಿದೆ.
ದಿನಾಂಕ 23-10-2023ನೇ ಸೋಮವಾರ ಬೆಳಿಗ್ಗೆ ಗಂಟೆ 9.15ಕ್ಕೆ ಮಹಾಗಣಪತಿ ಹೋಮ, ಬೆಳಗ್ಗಿನ ಪೂಜೆ, ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಂಧ್ಯಾಪೂಜೆ, ವಿಸರ್ಜನಾ ಪೂಜೆ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ನೆಡ್ಯಾರ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ.