- Advertisement -
- Advertisement -
ಯುವ ವಕೀಲೆಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೇರಳದ ಕೊಟ್ಟಾರಕ್ಕರದಲ್ಲಿ ಈ ಘಟನೆ ನಡೆದಿದೆ. ಅಷ್ಟಮಿ ಅಜಿತ್ ಕುಮಾರ್ ಆತ್ಮಹತ್ಯೆಗೈದ ಯುವತಿ.
ವೃತ್ತಿಯಲ್ಲಿ ವಕೀಲೆಯಾಗಿದ್ದ ಅಷ್ಟಮಿ ಅಜಿತ್ ಕುಮಾರ್ ಕಳೆದ 6 ತಿಂಗಳ ಹಿಂದಷ್ಟೇ ವಕೀಲೆಯಾಗಿ ಕೆಲಸಕ್ಕೆ ಸೇರಿದ್ದಳು. ಸಾವಿನ ಬಗ್ಗೆ ಮನೆಯವರು ಸಂಶಯಗೊಂಡಿದ್ದು ಆತ್ಮಹತ್ಯೆ ಮಾಡುವ ಮುಂಚೆ ಕಛೇರಿಯಿಂದ ಕರೆ ಬಂದಿದೆ ಎನ್ನಲಾಗಿದೆ. ಪೊಲೀಸರು ಮೊಬೈಲ್ ಅನ್ನು ಪರಿಶೀಲನೆಗಾಗಿ ತೆಗೆದುಕೊಂಡಿದ್ದು ತನಿಖೆ ಮುಂದುವರಿದಿದೆ.
- Advertisement -