Sunday, May 19, 2024
spot_imgspot_img
spot_imgspot_img

ಕಾಸರಗೋಡು: 6 ಮಂದಿ ಯುವಕರಿಗೆ ಚಾಕುವಿನಿಂದ ಇರಿದ ವ್ಯಕ್ತಿ; ಮೂವರ ಸ್ಥಿತಿ ಗಂಭೀರ!

- Advertisement -G L Acharya panikkar
- Advertisement -
driving

ಕಾಸರಗೋಡು: ಕುಂಬಳೆ ಸಮೀಪದ ಬಂಬ್ರಾಣದಲ್ಲಿ ಯುವಕನೋರ್ವ ಆರು ಮಂದಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರನ್ನು ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್ (23), ನವೀನ್ (22) , ಧೀರಜ್ (21 , ಪ್ರವೀಣ್ (21) ಮತ್ತು ಚರಣ್ (23) ಎನ್ನಲಾಗಿದೆ.

ಕೋಳಿ ಅಂಕದ ಸ್ಥಳದಲ್ಲಿ ಉಂಟಾದ ಮಾತಿನ ಚಕಮಕಿಯೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಕುಂಬಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!