Friday, May 3, 2024
spot_imgspot_img
spot_imgspot_img

2 ತಿಂಗಳಲ್ಲಿ 9 ಬಾರಿ ಬಾಲಕನಿಗೆ ಕಚ್ಚಿದ ಹಾವು; ಮನೆ ಬದಲಾಯಿಸಿದರೂ ತಪ್ಪಿಲ್ಲ ಕಾಟ..!

- Advertisement -G L Acharya panikkar
- Advertisement -

ಬಾಲಕನೊಬ್ಬನಿಗೆ ಎರಡು ತಿಂಗಳ ಅಂತರದಲ್ಲಿ ಹಾವೊಂದು 9 ಬಾರಿ ಕಚ್ಚಿದು ಪವಾಡಸದೃಶ ರೀತಿಯಲ್ಲಿ ಬಾಲಕ ಬದುಕುಳಿದಿರುವ ಅಚ್ಚರಿಯ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.

ಬಾಲಕ ಪ್ರಜ್ವಲ್​, ಹಲಕರ್ಟಿ ಗ್ರಾಮದ ವಿಜಯಕುಮಾರ್-ಉಷಾ ದಂಪತಿಯ ಪುತ್ರ. ಗ್ರಾಮದ ತನ್ನ ಮನೆಯಲ್ಲಿ ಮೊದಲ ಬಾರಿ ಜುಲೈ 3 ರಂದು ಹಾವು ಕಡಿಯಿತು. ಬಳಿಕ ಎರಡು-ಮೂರು ಬಾರಿ ಹಾವು ಕಚ್ಚಿದ ಹಿನ್ನಲೆಯಲ್ಲಿ ದಂಪತಿ ಹೆದರಿ ಹಲಕರ್ಟಿ ಗ್ರಾಮದ ಮನೆ ಬಿಟ್ಟಿದ್ದರು.

ಹಲಕರ್ಟಿ ಬಳಿಕ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದರು. ಆದರೆ, ಇಲ್ಲಿಯೂ ಪ್ರಜ್ವಲ್​ಗೆ ಅದೇ ಹಾವು ಕಡಿದಿದೆ. ಬಾಲಕನ ಕೈ-ಕಾಲು ಸೇರಿ ಹಾವು ವಿವಿಧಡೆ ಕಚ್ಚಿದೆ. ಆದರೆ, ಹಾವು ಮಾತ್ರ ಪಾಲಕರಿಗಾಗಲಿ ಅಥವಾ ಕುಟುಂಬಸ್ಥರಿಗಾಗಲಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಕನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.

9 ಬಾರಿ ಹಾವು ಕಡಿತಕ್ಕೆ ಒಳಗಾದಾಗ 6 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, 3 ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆದ ಬಳಿಕ ಎರಡ್ಮೂರು ದಿನದಲ್ಲೆ ಮತ್ತೆ ಹಾವು ಕಡಿಯುತ್ತಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಪ್ರಜ್ವಲ್​ಗೆ ಚಿಕಿತ್ಸೆ ಮುಂದುವರಿದಿದೆ.

- Advertisement -

Related news

error: Content is protected !!