Wednesday, July 29, 2026
spot_imgspot_img
spot_imgspot_img

*ವಿಟ್ಲ ಸರ್ಕಾರಿ ಜಾಗದಲ್ಲಿ ಜುಗಾರಿ ಆಡುತ್ತಿದ್ದವರ ಮೇಲೆ ದಾಳಿ- ಮೊಬೈಲ್, ಇಸ್ಪೀಟ್ ಎಲೆಗಳು, ನಗದು ವಸ್ತುಗಳ ವಶ*

- Advertisement -
- Advertisement -

ವಿಟ್ಲ: ಜುಗಾರಿ ಆಡುತ್ತಿದ್ದಲ್ಲಿಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರಾದ ವಿನೋದ್ ಎಸ್ ಕೆ ಅವರ ತಂಡ ದಾಳಿ ನಡೆಸಿದ ಘಟನೆ ಪಳಿಕೆಯಲ್ಲಿ ಭಾನುವಾರ ನಡೆದಿದೆ.

ನೆತ್ರಕೆರೆ ನಿವಾಸಿ ಮಾಧವ (58), ಅನ್ನಮೂಲೆ ನಿವಾಸಿ ಬಾಲಕೃಷ್ಣ ಯಾನೆ ಹರೀಶ್ (42), ಸೀಗೆಬಲ್ಲೆ ನಿವಾಸಿ ದಿನೇಶ್ (40), ಮಂಗಳಪದವು ನಿವಾಸಿ ಯಾದವ ಪೂಜಾರಿ (47), ಕಡಂಬು ನಿವಾಸಿ ಬಾಲಕೃಷ್ಣ ಕೊಟ್ಟಾರಿ (50), ಪಡಾರು ನಿವಾಸಿ ನಾರಾಯಣ ಪೂಜಾರಿ (55) ಬಂಧಿತ ಆರೋಪಿಗಳಾಗಿದ್ದಾರೆ.

ಸರ್ಕಾರಿ ಜಾಗದಲ್ಲಿ ಜುಗಾರಿ ಆಡುತ್ತಿದ್ದವರ ಮೇಲೆ ದಾಳಿ ಸಂದರ್ಭದಲ್ಲಿ ಆರು ಮಂದಿ ಪತ್ತೆಯಾಗಿದ್ದು, ಅವರಿಂದ ಮೊಬೈಲ್, ಇಸ್ಪೀಟ್ ಎಲೆಗಳು, ನಗದು ಸೇರಿ ಒಟ್ಟು 20ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!