


ಮದುವೆಯ ಮೊದಲರಾತ್ರಿ ಅಂದರೆ ಜೋಡಿಗಳಿಗೆ ಎಂದೂ ಮರೆಯಲಾರದ ದಿನ. ಖುಷಿಯ ಉತ್ತಂಗದಲ್ಲಿರುವ ಜೋಡಿಗಳು ಆ ದಿನಕ್ಕಾಗಿ ಕಾಯುವುದುಂಟು. ಇಲ್ಲೂ ಸಹ ವಧು ಸಿಂಗಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ ಹಿಡಿದುಕೊಂಡು ಆಸೆಯ ಬುತ್ತಿಕಟ್ಟಿಕೊಂಡು ತಮ್ಮ ಕೋಣೆಗೆ ಹೋಗಿದ್ದಾಳೆ.
ಬಾಗಿಲನ್ನು ಬಡಿದಾಗ ಗಂಡ ತೆಗೆದು ಮುದ್ದಿಸುತ್ತಾನೆ ಎಂದು ಕಲ್ಪಿಸಿಕೊಂಡಿದ್ದ ವಧುಗೆ ಮೊದಲ ಹಂತದಲ್ಲೇ ಶಾಕ್ ಆಗಿದೆ. ಶೋಭನದ ಕೋಣೆಯಲ್ಲಿದ್ದ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆಗ ವಧು ಮಾಹಿತಿಯನ್ನು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ.
ಉಳಿದವರೆಲ್ಲಾ ಓಡೋಡಿಬಂದು ನೋಡಿದಾಗ ಎದುರಿಗಿದ್ದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಜೇನಿನಂತೆ ಸಿಹಿ ಆಗಬೇಕಾಗಿದ್ದ ಆ ರಾತ್ರಿ ಕಹಿಯ ರಾತ್ರಿಯಾಗಿದೆ. ಮಧುಮಗ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಮಚರಿಯಾ ಗ್ರಾಮದ ಮನೋಜ್ ಯಾದವ್ ಎಂಬ ಯುವಕನ ಮದುವೆ ಮೇ 26 ರಂದು ನಡೆದಿದೆ. ಮೇ 28ರಂದು ಕುಟುಂಬಸ್ಥರು ಶೋಭನಕ್ಕೆ ಶುಭ ಮುಹೂರ್ತ ನಿಗದಿ ಮಾಡಿದ್ದಾರೆ. ಸಂಪ್ರದಾಯದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರು ರಾತ್ರಿ 10 ಗಂಟೆ ಸುಮಾರಿಗೆ ವಧುವನ್ನು ಶೋಭನದ ಕೋಣೆಗೆ ಕಳುಹಿಸಿದ್ದಾರೆ.
ಆದರೆ ಕೋಣೆಯಲ್ಲಿರುವ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಇದರೊಂದಿಗೆ ವಧು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ. ಅಲ್ಲಿಗೆ ಬಂದಾಗ ವರ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಾಣುತ್ತದೆ. ಇದರಿಂದ ಇಡೀ ಕುಟುಂಬ ದುರಂತದ ಶಾಕ್ ತುತ್ತಾಗುತ್ತದೆ. ಅಸಲಿಗೆ ವರನ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.