Saturday, June 28, 2025
spot_imgspot_img
spot_imgspot_img

ಬಂಟ್ವಾಳ : ಅಂದರ್ ಬಾಹರ್ ಅಡ್ಡಕ್ಕೆ ಪೊಲೀಸ್ ದಾಳಿ.

- Advertisement -
- Advertisement -

ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ವೇಳೆ ಅಪರಾಧ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಹತ್ತು ಜನರನ್ನು ವಶಕ್ಕೆ ಪಡೆದ ಘಟನೆ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ.

ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಸಮಯದಲ್ಲಿ ಸಿ.ಎನ್.ಇ. ಅಪರಾಧ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಜಯಕುಮಾರ್, ಗಂಗಾಧರ, ಕಿರಣ್ ಕುಮಾರ್, ಜಯರಾಮ, ಶೈಲೇಶ್, ಪ್ರಕಾಶ, ರಮಾನಾಥ, ಅಶ್ವತ್ಥ, ಲಕ್ಷ್ಮಣ, ಡೋಗ್ರಾ ಎಂಬವರನ್ನು ವಶಕ್ಕೆ ಪಡೆದು, ಆರೋಪಿಗಳು ಜೂಜಾಟವಾಡಲು ಉಪಯೋಗಿಸಿದ ಇಸ್ಪೀಟು ಎಲೆಗಳು, ಚಾರ್ಜರ್ ಲೈಟ್ ಹಾಗೂ ನಗದು ರೂ. 7520/- ನ್ನು ವಶಕ್ಕೆ ಪಡೆದಿರುತ್ತಾರೆ. ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!