Sunday, June 29, 2025
spot_imgspot_img
spot_imgspot_img

ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದಿಲ್ಲ- ಅನಂತ ಹೆಗಡೆ ಆಶೀಸರ

- Advertisement -
- Advertisement -

ಕಡಬ: ಕುಮಾರಧಾರ ನದಿಗೆ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ರೈತರ ಕೃಷಿ ಭೂಮಿಗಳನ್ನು ನಾಶ ಮಾಡುವ ಪರಿಸರ ಹಾಗೂನಿರ್ಮೂಲನೆ ಮಾಡುವ ಯೋಜನೆಗಳಿಗೆ ಅವಕಾಶ ನೀಡದೆ ಶಾಶ್ವತವಾಗಿ ನದಿಯನ್ನು ಮೂಲ ಸ್ವರೂಪದಲ್ಲಿಉಳಿಸಿಕೊಳ್ಳಲಾಗುವುದು ಎಂದು ರಾಜ್ಯ ಜೀವ ವೈವಿದ್ಯ
ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಅವರು ಭಾನುವಾರ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಯನ್ನು ವಿರೋಧಿಸುವ ನಿಟ್ಟಿನಲ್ಲಿಕುಮಾರಧಾರ ಪರಿಸರ ಸಂರಕ್ಷಣ ಸಮಿತಿಯವರು
ಹಮ್ಮಿಕೊಂಡಿದ್ದ ನದಿ ಪೂಜೆ ಕಾರ್ಯಕ್ರಮದಲ್ಲಿ ಬಾಗಿಅರ್ಪಿಸಿ ಮಾತನಾಡಿದರು.

ಇಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ನಮ್ಮ ಹೋರಾಟದ ಫಲವಾಗಿ ಈಗಾಗಲೇ ಯೋಜನೆ ಸ್ಥಗಿತವಾಗಿದೆ, ಯೋಜನೆಯನ್ನುಸಂಪೂರ್ಣವಾಗಿ ಕೈಬಿಡಬೇಕು ಎನ್ನುವ ಉದ್ದೇಶ ಈಡೇರುತ್ತಿದೆ ಯಾಕೆಂದರೆ ಅಣೆಕಟ್ಟು ನಿರ್ಮಾಣ ಗುತ್ತಿಗೆ ಅವಧಿ ಮುಗಿದಿದೆ. ಇನ್ನು ಅವಕಾಶ ಸಿಗದಂತೆ ನೋಡಿಕೊಳ್ಳಲು ಸರಕಾರಕ್ಕೆ ಒತ್ತಡ ಹೇರಲಾಗುವುದು.

ನದಿಯ ಮೂಲ ಹಾಗೂ ನದಿಗಳ ಸಂರಕ್ಷಣೆ ದೃಷ್ಠಿಯಿಂದ ನೀರಿನ ಉಪಯುಕ್ತತೆಗೆ ಬೇಕಾಗುವ ಸಣ್ಣಪುಟ್ಟ ಕಿಂಡಿ ಅಣೆಕಟ್ಟುಗಳನ್ನು  ಹೊರತುಪಡಿಸಿ ಕುಮಾರಧಾರ ನದಿ ಸೇರಿದಂತೆ ರಾಜ್ಯದ ಯಾವುದೇ ನದಿಗಳಿಗೆ ವಿದ್ಯುತ್ ಉತ್ಪಾದನೆಯ ಬೃಹತ್ ಯೋಜನೆಗಳಿಗೆ ಇನ್ನು ಅವಕಾಶ ಖಂಡಿತಾ ಇಲ್ಲ ಎಂದು ಹೇಳಿದರು.ಸುಳ್ಯ, ಸುಬ್ರಹ್ಮಣ್ಯ, ಕಡಬ ಕಡೆಗಳಲ್ಲಿ ಪ್ರವಾಸ ಮಾಡಿದ ಅವಂತ ಹೆಗಡೆಯವರು ಇಲ್ಲಿನ ವಿವಿಧ ಇಲಾಖಾ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.

- Advertisement -

Related news

error: Content is protected !!