- Advertisement -
- Advertisement -
ಪುತ್ತೂರು: ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದಲ್ಲಿ ಪುಳಿಮುಂಚಿ ಸಿನೆಮಾ ಇಂದು ಪ್ರೀಮಿಯರ್ ಶೋ ಮೂಲಕ ಬಿಡುಗಡೆಯಾಯಿತು.
ಭಾರತ್ ಸಿನೆಮಾ ಪುತ್ತೂರಿನಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಉದ್ಘಾಟಿಸಿದರು. ಪುತ್ತೂರಿನ ಯುವಕ ಹರಿ ಪ್ರಸಾದ್ ಇವರ ಸಾಧನೆ ಇನ್ನು ಮುಂದುವರೆದು ಇನ್ನು ಹಲವು ಸಿನಿಮಾ ನೀಡುವಂತಗಲಿ, ತುಳು ಸಿನೆಮಾ ಗೆದ್ದರೆ ತುಳುವರು ಗೆದ್ದಂತೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಿರ್ಮಾಪಕರಾದ ಹರಿಪ್ರಸಾದ್ ರೈ ಮಠಂತಬೆಟ್ಟು, ಪಂಜಿಗುಡ್ಡೆ ಈಶ್ವರ ಭಟ್, ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ ಬಳ್ಳಮಜಲು, ಸವಿತಾ ಎಸ್ ರೈ ಮಠಂತಬೆಟ್ಟು, ಶಿವ ಪ್ರಸಾದ್ ರೈ ಮಠಂತಬೆಟ್ಟು, ಸಿನೆಮಾ ನಟ ರವಿ ರಾಮಕುಂಜ ಹಾಗೂ ಸಿನೆಮಾದ ನಿರ್ದೇಶಕರಾದ ತ್ರಿಶೂಲ್ ಶೆಟ್ಟಿ ಉಪಸ್ಥಿತರಿದ್ದರು.
- Advertisement -