- Advertisement -
- Advertisement -
ಮಂಗಳೂರು: ಬೆಳಗಿನ ಜಾವ ವಾಕಿಂಗ್ ತೆರಳಿದ್ದ ಮಹಿಳೆಯ ಕತ್ತಿನಿಂದ ಕರಿಮಣಿ ಎಗರಿಸಿದ ಘಟನೆ ಮಂಗಳೂರಿನಲ್ಲಿ ಮುಂಜಾನೆ ನಡೆದಿದೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.21ರಂದು ಬೆಳಗಿನ ಜಾವ 5:30 ಗಂಟೆಗೆ ನಗರದ ಮಹಿಳಾ ನಿವಾಸಿಯೋರ್ವರು ಎಂದಿನಂತೆ ತನ್ನ ಮನೆಯಾದ ಬಿಜೈ ನ್ಯೂ ರೋಡ್ ನಿಂದ ಭಾರತಿ ನಗರ ಕ್ರಾಸ್ ರಸ್ತೆಯಿಂದ ಬಿಜೈ ಚರ್ಚ್ ಕಡೆಗೆ ವಾಕಿಂಗ್ ಮಾಡುತ್ತಾ ಬಿಜೈ ಜಂಕ್ಷನ್ ಕಡೆಗೆ ಹೋಗುತ್ತಿದ್ದರು.
ಈ ವೇಳೆ ಎದುರುಗಡೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸವಾರರು ಮಹಿಳೆಯನ್ನು ನಿಲ್ಲಿಸಿ ಬೀಚ್ ಗೆ ಹೋಗುವ ರಸ್ತೆಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆ ಮಹಿಳೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -