



ಪುತ್ತೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ ) ವತಿಯಿಂದ ಅಕ್ಟೋಬರ್ 28 ಹಾಗೂ 29 ರಂದು ಉಡುಪಿ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ, ಕವಿ ಸಮಯ-ಕಾವ್ಯ ನಮನ -ಚಿತ್ರ ಚಿತ್ತಾರದಲ್ಲಿ ತುಳು ಕನ್ನಡ ಸಾಹಿತಿ, ಕವಯಿತ್ರಿ, ಅಂಕಣಗಾರ್ತಿ ಶ್ರೀಮತಿ ಮಲ್ಲಿಕಾ ಜೆ .ರೈ ಗುಂಡಿಯಡ್ಕ ಇವರು ಆಯ್ಕೆಯಾಗಿದ್ದು ತಮ್ಮ ಕವನವನ್ನು ಪ್ರಸ್ತುತಪಡಿಸಲಿದ್ದಾರೆ.
ಮಲ್ಲಿಕಾ ಜೆ. ರೈಯವರು ಪ್ರಸ್ತುತ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಮುಕ್ರಂಪಾಡಿ ಪುತ್ತೂರು ಇದರ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕವಯತ್ರಿಯಾಗಿ ಪುತ್ತೂರು ಸುದ್ದಿ ಬಿಡುಗಡೆಯ “ಹನಿ-ಮಿನಿ-ಕಾವ್ಯ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಕವನ ಲೇಖನ ಚಿಂತನ ಬರಹಗಳನ್ನು ಬರೆದಿರುವ ಇವರ ಕೆಲವು ಕೃತಿಗಳೂ ಪ್ರಕಟವಾಗಿವೆ. ತಾಲೂಕು, ಜಿಲ್ಲಾ, ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕನ್ನಡ-ತುಳು ಕವನಗಳನ್ನು ಪ್ರಸ್ತುತ ಪಡಿಸಿರುವ ಮಲ್ಲಿಕಾ ಜೆ.ರೈಯವರು ಉತ್ತಮ ಹಾಡುಗಾರ್ತಿಯೂ ಹೌದು. ವಿಟಿವಿ ಮಾಧ್ಯಮದ ಅಂಕಣಗಾರ್ತಿ ಕೂಡ ಆಗಿರುತ್ತಾರೆ.