ಹಸೆಮಣೆ ಏರಬೇಕಿದ್ದ ಕಾನೂನು ವಿದ್ಯಾರ್ಥಿನಿ ಒಬ್ಬಳು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ತಮಿಳುನಾಡು ನೀಲಗಿರೀಸ್ ಮೂಲದ ಕವೀಶ (21) ಎಂದು ಗುರುತಿಸಲಾಗಿದೆ.
ಈಕೆಯು ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ 7ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಊಟಿ ನಗರದ ನಿವಾಸಿ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಈ ವಿಷ್ಯ ಎರಡು ಮನೆಯವರಿಗು ಗೊತ್ತಾಗಿತ್ತು. ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದರು.
ಆದರೆ ಮದುವೆಗೆ ಮೊದಲೇ ಕಿರಣ್ ಕುಟುಂಸ್ಥರಿಂದ ವರದಕ್ಷಿಣೆ ಕಿರುಕುಳ ಪ್ರಾರಂಭವಾಗಿತ್ತು. ಕಾರು ಹಾಗೂ ಭಾರೀ ಮೊತ್ತದಲ್ಲಿ ಚಿನ್ನ ನೀಡಬೇಕು ಎಂದು ಪೀಡಿಸಿದ್ದಾರೆ ಎನ್ನಲಾಗಿದೆ. ಕಾರು, ಚಿನ್ನ ಕೊಡದಿದ್ದರೇ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಕಾರಣಗಳಿಂದ ಮನನೊಂದಿದ್ದ ವಿದ್ಯಾರ್ಥಿನಿಯು ತಾನು ತಂಗಿದ್ದ ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು, ಮದುವೆ ಆಗಲು ಬಯಸಿದ್ದ ಕಿರಣ್ ಹಾಗೂ ತಂದೆ ಸೇತುಮಾಧವ, ತಾಯಿ ಲತಾ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.