Sunday, June 29, 2025
spot_imgspot_img
spot_imgspot_img

(ಜ.23)ಯಕ್ಷ ಸಂಗಮ ಉಪ್ಪಿನಂಗಡಿಯ ನೇತೃತ್ವದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಹನುಮಗಿರಿ ಮೇಳದ ಯಕ್ಷಗಾನ ಬಯಲಾಟ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಮತ್ತು ಯಕ್ಷ ಸಂಗಮ ಉಪ್ಪಿನಂಗಡಿಯ ಸಹಯೋಗದಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರದ ಪ್ರತಿಷ್ಟಾಪನೆ ಯ ಸುಸಂದರ್ಭದಲ್ಲಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ದಿನಾಂಕ 23.01.2024ರಂದು ಸಂಜೆ 6.30 ರಿಂದ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ದ ವಠಾರದಲ್ಲಿ *ನಮೋ ರಘುವಂಶದೀಪ ಎಂಬ ಯಕ್ಷಗಾನ ಬಯಲಾಟ ಜರಗಲಿರುವುದು. ಇದರ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಬಿಡುಗಡೆ ದಿನಾಂಕ 15.01.2024 ನೇ ಸೋಮವಾರ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಜಯಂತ್ ಪುರೋಳಿ, ವಿಶ್ವಹಿಂದೂ ಪರಿಷತ್ತಿನ ಉಪ್ಪಿನಂಗಡಿ ಅಧ್ಯಕ್ಷರಾದ ಸುದರ್ಶನ್ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯಕ್ಷ ಸಂಗಮದ ಶ್ಯಾಮ ಸುದರ್ಶನ ಹೊಸಮೂಲೆ, ರವೀಶ್ ಎಚ್.ಟಿ., ಸುಧಾಕರ್ ಶೆಟ್ಟಿ ಉಪ್ಪಿನಂಗಡಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಮುಳಿಯ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಮಹೇಶ್ ಬಜತ್ತೂರು, ವಿದ್ಯಾಧರ ಜೈನ್, ಸುರೇಶ್ ಅತ್ರಮಜಲು, ಧನು ನಟ್ಟಿಬೈಲ್, ಹರೀಶ್ ನಟ್ಟಿಬೈಲ್, ಚಂದ್ರಶೇಖರ ಮಡಿವಾಳ, ಪ್ರಸಾದ್ ಭಂಡಾರಿ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು.

- Advertisement -

Related news

error: Content is protected !!