ಕುಡಿತ್ತದ ಮತ್ತಿನಲ್ಲಿ ಬಾರ್ ಮಾಲೀಕನನ್ನು ದುಷ್ಕರ್ಮಿಗಳು ಅನವಶ್ಯಕವಾಗಿ ಹಲ್ಲೆ ಮಾಡಿರುವ ಘಟನೆ ಸಾಲಿಗ್ರಾಮದ ಚಿತ್ರಪಾಡಿಯ ನರ್ತಕಿ ಬಾರ್ನಲ್ಲಿ ನಡೆದಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ. ರೋಹಿತ್, ರಂಜಿತ್, ಸಚಿನ್, ಶಶಾಂಕ್, ವಿಘ್ನೇಶ್ ಬಂಧಿತ ಆರೋಪಿಗಳು.
ಸೈನ್ಯದಿಕಾರಿಯಾಗಿದ್ದ ತನ್ನ ಸ್ನೇಹಿತರಿಗಾಗಿ ಬಾರ್ನಲ್ಲಿ ಪಾರ್ಟಿ ನಡೆಸಿಸುತ್ತಿರುವ ಸಂದರ್ಭದಲ್ಲಿ ಅನವಶ್ಯಕವಾಗಿ ನಡೆದ ಗಲಾಟೆಯಲ್ಲಿ ಬಾರ್ ಮಾಲೀಕನ ಜತೆ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ನಡೆದು, ವಿಷಯ ತಾರಕಕ್ಕೇರಿ ಬಾರ್ ಮಾಲೀಕನ ಮೇಲೆ ದುಷ್ಕರ್ಮಿಗಳು ಕೈ ಹಾಕಿ, ಕೊನೆಗೆ ಹೊಡೆದು ಕೆಳಕ್ಕೆ ಉರುಳಿಸಿ, ಅವರನ್ನು ತುಳಿದು ಥಳಿಸಿದ್ದಾರೆ ಎಂದು ಮೂಲಗಳ ಮೂಲಕ ತಿಳಿದುಬಂದಿದ್ದೆ.
ಪ್ರಕರಣದ ಪ್ರಮುಖ ಆರೋಪಿಗಳೆನ್ನಲಾದ ಇಬ್ಬರನ್ನು ಪ್ರಕರಣದಿಂದ ಹೊರಗಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಭಾವಿ ರಾಜಕಾರಣಿಯ ಕೃಪಾಕಟಾಕ್ಷವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.