- Advertisement -
- Advertisement -
ಮಂಗಳೂರು: ಖಾಸಗಿ ಬಸ್ ಚಾಲಕನಿಗೆ ಒಂದು ತಂಡದಿಂದ ಹಲ್ಲೆ ನಡೆದಿರುವ ಘಟನೆ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ ದಲ್ಲಿ ಸಂಭವಿಸಿದೆ.
ಭಾಸ್ಕರ್ ಹಲ್ಲೆಗೊಳಗಾದ ಬಸ್ ಚಾಲಕ ಎಂದು ತಿಳಿದುಬಂದಿದೆ.
ರಾತ್ರಿ 8ರ ಸುಮಾರಿಗೆ ಬಸ್ನಲ್ಲಿ ಚಾಲಕನು ಹುಡುಗಿಯ ಜತೆ ಮಾತನಾಡುತ್ತಿದ್ದನೆಂಬ ಕಾರಣಕ್ಕೆ ಕೆಲವರು ಆಯುಧದಿಂದ ಕೂಡ ಹಲ್ಲೆ ನಡೆಸಿದ್ದು,ಚಾಲಕ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಘಟನೆ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ವಶಕ್ಕೆ ಪಡೆಯಲಾಗಿ ದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -