


ತಂಡವೊಂದು ವ್ಯಕ್ತಿಯೋರ್ವರ ಜಮೀನಿಗೆ ಅಕ್ರಮ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಾಲೇಶ್ವರ ಕುಂಡಲಿ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ವಿಲ್ಪ್ರೆಡ ರೋಡ್ರಿಗಸ್, ಸೈಮನ್ ಲೂಯಿಸ್ ರೊಡ್ರಿಗಸ್ ರಶೀದ ಹಳೇಸ್ಟೇಷನ್, ಧನಂಜಯ, ರವಿ ಹಾಗೂ ಇತರರು ಎಂದು ಗುರುತಿಸಲಾಗಿದೆ.
ಸತ್ಯನಾರಾಯಣ ಎಸ್.ಹೆಚ್. ಸಾಂತ್ಯಡ್ಕ ಮನೆ, ನೂಜಿಬಾಳ್ತಿಲಾ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ, ವ್ಯಕ್ತಿಗೆ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಾಲೇಶ್ವರ ಕುಂಡಲಿ ಎಂಬಲ್ಲಿ ಜಮೀನು ಹೊಂದಿದ್ದು, ಜಾಗವನ್ನು ನೆಲಸಮತಟ್ಟುಗೊಳಿಸಿ, ಅದರಲ್ಲಿ ನಿವೇಶನವನ್ನು ನಿರ್ಮಿಸಿರುವುದಾಗಿರುತ್ತದೆ. ಬೆಳಗ್ಗೆ ಕೃಷಿ ಮಾಡುವರೇ ಜೆ.ಸಿ.ಬಿ ವಾಹನದಲ್ಲಿ ಕೆಲಸ ಮಾಡಿಸುತ್ತಿದ್ದರು.
ಈ ವೇಳೆ ಆರೋಪಿತರಾದ ವಿಲ್ಪ್ರೆಡ ರೋಡ್ರಿಗಸ್, ಸೈಮನ್ ಲೂಯಿಸ್ ರೊಡ್ರಿಗಸ್ (70), ವಾಸ:ಕಲ್ಲಂತಡ್ಕ ಮನೆ, ಕೋಡಿಂಬಾಳ ಗ್ರಾಮ ಕಡಬ, ರಶೀದ ಹಳೇಸ್ಟೇಷನ್, ಧನಂಜಯ, ರವಿ ಮತ್ತು ಇತರರು, ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ವ್ಯಕ್ತಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಬಳಿಕ ವ್ಯಕ್ತಿಗೆ ಹಾಗೂ ಹಿಟಾಚಿ ಆಪರೇಟರ್ ಪ್ರಕಾಶ್ ರವರಿಗೆ ಆರೋಪಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ. ಸತ್ಯನಾರಾಯಣ ಮತ್ತು ಪ್ರಕಾಶ್ ರವರು ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.