



ಬೆಳ್ಳಾರೆ : ಜಮೀನು ತಕರಾರು ಹಿನ್ನೆಲೆ ಹಲ್ಲೆ ನಡೆಸಿರುವುದಾಗಿ ಇತ್ತಂಡಗಳು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಣೂರ ಗ್ರಾಮ ಕಡಬ ಇಡ್ಯಾಡಿ ನಿವಾಸಿ ಗುಣಪಾಲರಿಗೆ ಮತ್ತು ಪ್ರಸಾದ್ ಇಡ್ಯಾಡಿ ಎಂಬವರ ಮಧ್ಯೆ ಕಳೆದ 4 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ:- 27.05.2024ರಂದು ರಾತ್ರಿ ಗುಣಪಾಲರು ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ಹೋಗುತ್ತಾ ತನ್ನ ಮನೆಯ ಬಳಿ ತಲುಪಿದಾಗ, ಮುಂದಿನಿಂದ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ, ಆರೋಪಿ ಪ್ರಸಾದ್ ಇಡ್ಯಾಡಿ ಎಂಬವನು, ಆಟೋರಿಕ್ಷಾವನ್ನು ಗುಣಪಾಲರ ಸ್ಕೂಟರಿಗೆ ಅಡ್ಡ ಇಟ್ಟು ಅವ್ಯಾಚವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಆಟೋರಿಕ್ಷಾದಲ್ಲಿದ್ದ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಗಾಯಗೊಂಡು ನೆಲಕ್ಕೆ ಬಿದ್ದ ಗುಣಪಾಲರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಗೆ ಗುಣಪಾರ ಮಕ್ಕಳಾದ ಮೋಕ್ಷಿತ್, ಭವಿತ್, ರಂಜಿತ್ ಮತ್ತು ನೆರೆಮನೆಯ ಮನೋಹರ ರವರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿಯು ತನ್ನ ಕೈಯಲ್ಲಿದ್ದ ಬಾಲ್ ಕತ್ತಿಯೊಂದಿಗೆ ಆಟೋರಿಕ್ಷಾದಲ್ಲಿ ಆತನ ಮನೆಯ ಕಡೆಗೆ ಹೋಗಿದ್ದು. ಸ್ವಲ್ಪ ಸಮಯದ ಬಳಿಕ ಆರೋಪಿ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಎಂಬವರು ಸದ್ರಿ ಸ್ಥಳಕ್ಕೆ ವಾಪಾಸು ಬಂದಿದ್ದು, ಬಾಲಕೃಷ್ಣ ಎಂಬವರುಗುಣಪಾಲರ ಮಗ ಭವಿತ್ ನಿಗೆ ಜೀವಬೆದರಿಕೆ ಒಡ್ಡಿ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯನ್ನು ತಡೆಯಲು ಹೋದ ರಂಜಿತ್ ಮತ್ತು ಮನೋಹರ ನಿಗೂ ಬಾಲ್ ಕತ್ತಿಯು ತಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:55/2024, ಕಲಂ : 341,504,506,324,307, ಜೊತೆಗೆ 34 IPC ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಸಾದ್ ರವರು ನೀಡಿದ ಪ್ರತಿ ದೂರಿನಂತೆ, ಆರೋಪಿಗಳಾದ ಗುಣಪಾಲ 2) ಮೋಕ್ಷಿತ್, 3) ಚೇತನ್ 4) ಭವಿತ್ 5) ರಂಜಿತ್ 6) ಮನೋಹರ ಎಂಬವರುಗಳು ಸೇರಿ ತನಗೆ ಹಾಗೂ ತನ್ನ ಸಹೋದರನಾದ ಬಾಲಕೃಷ್ಣರವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಅ.ಕ್ರ. 56/2024, ಕಲಂ 341, 324ಜೊತೆಗೆ 34 IPC ರಂತೆ ಪ್ರಕರಣ ದಾಖಲಿಸಲಾಗಿದೆ. ಸದ್ರಿ ಎರಡೂ ಪ್ರಕರಣಗಳು ತನಿಖೆಯಲ್ಲಿರುತ್ತದೆ.