

ವಿಟ್ಲ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ (ರಿ.) ವಿಟ್ಲ ಘಟಕ, ಬಿಲ್ಲವ ಸಂಘ (ರಿ) ವಿಟ್ಲ ಮಹಿಳಾ ಘಟಕ ಮತ್ತು
ಆರ್.ಕೆ. ಕಲಾ ಸಂಸ್ಥೆಗಳು ಇದರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮವು ದಿನಾಂಕ 28-07-2024 ನೇ ರವಿವಾರ ಬೆಳಗ್ಗೆ ಗಂಟೆ 9:00 ಕ್ಕೆ ವಿಟ್ಲದ ಅರಮನೆ ಗದ್ದೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧವ ಪೂಜಾರಿ ಪಟ್ಲ (ಅಧ್ಯಕ್ಷರು ಬಿಲ್ಲವ ಸಂಘ (ರಿ) ವಿಟ್ಲ) ನಡೆಸಲಿದ್ದಾರೆ, ವೇದಿಕೆಯಲ್ಲಿ ಬಂಗಾರು ಅರಸರು ವಿಟ್ಲ ಅರಮನೆ ಇವರ ದಿವ್ಯ ಉಪಸ್ಥಿತಿಯೊಂದಿಗೆ, ರಾಜೇಶ್ ವಿಟ್ಲ (ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ) ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಅಶೋಕ್ ಕುಮಾರ್ ರೈ (ಮಾನ್ಯ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ) , ಅಶೋಕ್ ಕುಮಾರ್ ಪಡ್ಡು (ಉಪಾಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು), ಕೃಷ್ಣಯ್ಯ ಕೆ ವಿಟ್ಲ ಅರಮನೆ, ಸಂಜೀವ ಪೂಜಾರಿ ನಿತ್ಯ ( ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ವಿಟ್ಲ), ಬಾಬು ಪೂಜಾರಿ ಕೆ ( ಗೌರವಾಧ್ಯಕ್ಷರು ಬಿಲ್ಲವ ಸಂಘ (ರಿ) ವಿಟ್ಲ), ಎಲ್ಯಣ್ಯ ಪೂಜಾರಿ ( ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ) ಹಾಗೂ ಗೌರವ ಉಪಸ್ಥಿತಿಯಲ್ಲಿ ಗಣೇಶ್ ಪೂಂಜಾರಕೊಡಿ (ಸಂಘಟನಾ ಕಾರ್ಯದರ್ಶಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು), ಯಶವಂತ ಪೂಜಾರಿ ನಿತ್ಯ (ಸ್ಥಾಪಕ ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ), ಪ್ರಶಾಂತ್ ಚೊಕ್ಕಾಡಿ (ಅಧ್ಯಕ್ಷರು ಆರ್ ಕೆ ಯಕ್ಷಗಾನ ಕಲಾ ಕೇಂದ್ರ) ಭಾಗವಹಿಸಲಿದ್ದಾರೆ.
ಸಂಜೆ ಗಂಟೆ 3:30ಕಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀಕೃಷ್ಣ ಗುರೂಜಿ (ಧರ್ಮದರ್ಶಿಗಳು, ಕಾಳಕಾಯಿ ಆಂಜನೇಯ ದೇವಸ್ಥಾನ ಕುಕ್ಕಾಜೆ, ಮಾಣಿಲ.) ಆಶೀರ್ವಚನ ನೀಡಲಿದ್ದಾರೆ. ರಾಜೇಶ್ ವಿಟ್ಲ (ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ) ಇವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಧಾಕರ ಪೂಜಾರಿ ಬಡಗೋಡಿ (ಪ್ರಗತಿಪರ ಜೇನು ಕೃಷಿಕರು ), ಹರೀಶ್ C.H (ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ ), ರವಿ ವರ್ಮ (ವರ್ಮ ಸೌಂಡ್ ವಿಟ್ಲ), ಮನೋಜ್ ಕಂಪ ಅಧ್ಯಕ್ಷರು ಶ್ರೀ ವಿಷ್ಣು ಮೂರ್ತಿ ಯುವಕರ ಮಂಡಲ ವಿಷ್ಣುನಗರ),ವಿಶ್ವನಾಥ ಪೂಜಾರಿ ಗುರ್ಜನಡ್ಕ, ಮಮತಾ ಸಂಜೀವ ಪೂಜಾರಿ (ಅಧ್ಯಕ್ಷರು ಬಿಲ್ಲವ ಮಹಿಳಾ ಘಟಕ ವಿಟ್ಲ), ಕ್ಯಾಪ್ಟನ್ ದಾಸಪ್ಪ ಪೂಜಾರಿ ನೆಕ್ಕಿಲಾರು (ನಿವೃತ್ತ ಮಿಲಿಟರಿ ಸೇನಾಧಿಕಾರಿ ), ಚೇತನ್ ಮರುವಾಳ ( ಪ್ರಗತಿಪರ ಕೃಷಿಕರು),ಯಶೋಧ ಹರೀಶ್ ಮರುದಾಳ (ಫೇಮ್ಸ್ ಹರ್ಬಲ್ ಬ್ಯೂಟಿ ಪಾರ್ಲರ್, ವಿಟ್ಲ) ಭಾಗವಹಿಸಲಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
