



ವಿಟ್ಲ : ವಿಟ್ಲ ಮಹಾಶಕ್ತೀ ಕೇಂದ್ರದ ಸದಸ್ಯತಾ ಅಭಿಯಾನಕ್ಕೆ ವಿಟ್ಲ ಬಿಜೆಪಿ ಕಛೇರಿಯಲ್ಲಿ ಚಾಲನೆಯನ್ನು ಮಹಾಶಕ್ತೀ ಕೇಂದ್ರದ ಅಭಿಯಾನ ಉಸ್ತುವಾರಿಯಾಗಿ ಜಿಲ್ಲೆಯಿಂದ ನೇಮಕವಾಗಿರುವ ಸುಳ್ಯ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ನೆರವೇರಿಸಿ ವಿಟ್ಲ ಪಟ್ಟಣ ಪಂಚಾಯತು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸದಸ್ಯರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ಅಧ್ಯಕ್ಷತೆ ವಹಿಸಿದ್ದರು,ಮಹಾಶಕ್ತೀ ಕೇಂದ್ರ ಅಧ್ಯಕ್ಷರಾದ ಉದಯ್ ಆಲಂಗಾರು ಸ್ವಾಗತಿಸಿದರು ಕಾರ್ಯದರ್ಶಿ ಹರೀಶ್ ವಿಟ್ಲ ಧನ್ಯವಾದಗೈದರು,ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ,ಮಹಿಳಾ ಮೋರ್ಚ ಮಂಡಲ ಪ್ರಧಾನ ಕಾರ್ಯದರ್ಶೀ ಸಂಧ್ಯಾಗಣೇಶ್,ಸೊಸೈಟಿ ಅಧ್ಯಕ್ಷರಾದ ನರಸಪ್ಪ ಪೂಜಾರಿ,ಪಟ್ಟಣ ಪಂಚಾಯತು ಸದಸ್ಯರಾದ ಅಶೋಕ್ ವಿಟ್ಲ,ನೂತನ ಶಕ್ತೀ ಕೇಂದ್ರ ಸದಸ್ಯರಾದ,ಶಿಶಿರ್ ಗೌಡ,ವಸಂತ ಮಾಡ,ಮೋಹನ್ ದಾಸ್ ಉಕ್ಕುಡ ಮೊದಲಾದವರು ಉಪಸ್ಥಿತರಿದ್ದರು.
ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರಾದ ವಿಶ್ವನಾಥ ದೇವಾಡಿಗರವರ ನಿವಾಸಕ್ಕೆ ತೆರಳಿ ಅವರನ್ನು ಬಿಜೆಪಿಯ ಸದಸ್ಯತನವನ್ನು ಪುನರ್ನವೀಕರಣಗೊಳಿಸಲಾಯಿತು.
