- Advertisement -
- Advertisement -



ಪುತ್ತೂರು ನಗರಸಭಾ ಕಾರ್ಯಾಲಯ ಕಟ್ಟಡದ ಕಂಪೌಂಡ್ ಒಳಗಡೆ ಯಾವುದೇ ಸ್ಥಳೀಯ ಆಡಳಿತದ ಅನುಮತಿ ಇಲ್ಲದೇ ಹಸಿರು ಧ್ವಜವನ್ನು ಕಟ್ಟಿರುವುದು ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರಿ ಕಛೇರಿಗಳಲ್ಲಿ ಈ ರೀತಿಯಾಗಿ ಧ್ವಜವನ್ನು ಹಿಂದೂ ಸಮಾಜ ಕಟ್ಟಿರಲಿಲ್ಲ, ಇದನ್ನು ತಕ್ಷಣ ತೆರವುಗೊಳಿಸಬೇಕು, ಮುಂದೆ ಏನಾದರೂ ಅನಾಹುತವಾದರೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಎಚ್ಚರಿಕೆಯನ್ನುಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ಮೋಹನ್ ದಾಸ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ನಗರಸಭೆಯ ಅಧಿಕಾರಿಗಳು ಅನಧಿಕೃತ ಹಸಿರು ಧ್ವಜ ತೆರವುಗೊಳಿಸಿದ ಬಗ್ಗೆ ವರದಿಯಾಗಿದೆ. ಕಾನೂನು ಉಲ್ಲಂಘಿಸಿ, ಸರಕಾರಿ ನಗರಸಭೆ ಕಟ್ಟಡದ ಗೇಟಿಗೆ ಹಸಿರು ಧ್ವಜ ಹಾಕಿದ ಪುಂಡರ ವಿರುದ್ಧ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗ್ರಹಸಿದೆ.
- Advertisement -