Saturday, June 28, 2025
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24 ನೇ ಸಾಲಿನ 69 ನೇ ವಾರ್ಷಿಕ ಮಹಾಸಭೆ

- Advertisement -
- Advertisement -

ಪ್ರಸ್ತುತ ಸಾಲಿನಲ್ಲಿ ಬ್ಯಾಂಕ್ ರೂ 2,97,28,008.02 ಲಾಭದೊಂದಿಗೆ ಸತತ ಮೂರನೇ ಬಾರಿ ಸಾಧನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ:- ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ಘೋಷಣೆ

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24 ನೇ ಸಾಲಿನ 69 ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷರು ಹೆಚ್ ಜಗನ್ನಾಥ ಸಾಲಿಯಾನ್‌ರವರ ಅಧ್ಯಕ್ಷತೆಯಲ್ಲಿ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನೀಲಪ್ಪ ಗೌಡ ಆರ್‌ ಹಾಗೂ ಗೌರಮ್ಮ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷ ದಿ| ವೆಂಕಪ್ಪಯ್ಯ ಮತ್ತು ಮಾಜಿ ಅಧ್ಯಕ್ಷ ದಿ| ಎಲ್. ಎನ್ ಕುಡೂರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಮೋಹನ್ ಕೆ.ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್, ನಿರ್ದೇಶಕರುಗಳಾದ ಎಂ ಹರೀಶ್ ನಾಯಕ್, ಮನೋರಂಜನ್ ಕೆ.ಆರ್, ವಿಶ್ವನಾಥ ಎಂ, ಉದಯ ಕುಮಾರ್ ಎ, ಬಾಲಕೃಷ್ಣ ಪಿ.ಎಸ್, ದಿವಾಕರ ವಿ, ದಯಾನಂದ ಆಳ್ವ ಕೆ, ಸುಂದರ ಡಿ, ಗೋವರ್ಧನ ಕುಮಾರ್ ಐ, ಶುಭ ಲಕ್ಷ್ಮೀ, ಜಯಂತಿ ಎಚ್. ರಾವ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಅಧ್ಯಕ್ಷರು ಹೆಚ್ ಜಗನ್ನಾಥ ಸಾಲಿಯಾನ್ ಮಾತನಾಡಿ ಬ್ಯಾಂಕಿನಲ್ಲಿ 32 ಖಾಯಂ ಸಿಬ್ಬಂದಿಗಳಿದ್ದು, 2022-2023ನೇ ಸಾಲಿನಲ್ಲಿ 615.74 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿ, ರೂಪಾಯಿ 2,61,61,492.78 ಲಾಭವನ್ನು ಗಳಿಸಿದ್ದು, 2023-2024ನೇ ಸಾಲಿನಲ್ಲಿ 690.20 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ, ರೂಪಾಯಿ 2,97,28,008.02 ಲಾಭವನ್ನು ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ “ಎ” ತರಗತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಈ ವರ್ಷವು ಬ್ಯಾಂಕ್‌ ತನ್ನ ವ್ಯವಹಾರವನ್ನು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಶುಭ ಸಂದರ್ಭದಲ್ಲಿ ಸದಸ್ಯರಿಗೆ 22% ಡಿವಿಡೆಂಡನ್ನು ಘೋಷಿಸಿದೆ ಹಾಗೂ ಬ್ಯಾಂಕಿನ ವ್ಯವಹಾರದಲ್ಲಿ ಸರ್ವತೋಮುಖ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಕ್ ನಿ. ಮಂಗಳೂರು ಇವರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸತತ 3ನೇ ಬಾರಿಗೆ “ಸಾಧನಾ ಪ್ರಶಸ್ತಿ” ಲಭಿಸಿದೆ ಎಂದು ಘೋಷಣೆ ಮಾಡಿದರು. ಈಗಾಗಲೇ ಕನ್ಯಾನ , ಪುತ್ತೂರು, ಬಿ ಸಿ ರೋಡ್, ಕಲ್ಲಡ್ಕ ಶಾಖೆಗಳು ಉತ್ತಮ ರೀತಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು, ಕಲ್ಲಡ್ಕ ಶಾಖೆಯ ನೂತನ ಕಚೇರಿ ಕಟ್ಟಡ ಮುಕ್ತಾಯದ ಹಂತದಲ್ಲಿದ್ದು, ಶೀಘ್ರವಾಗಿ ಉದ್ಘಾಟನೆಗೊಳ್ಳಲಿದೆ. ಉಪ್ಪಿನಂಗಡಿಯಲ್ಲಿ ಶಾಖೆ ಆರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹಿಂದಿನ ಮಹಾಸಭೆಯ ನಡವಳಿಕೆಯನ್ನು ನಿರ್ದೇಶಕ ಗೋವರ್ಧನ ಕುಮಾರ್ ಐ ಓದಿ ಮಂಡಿಸಿದರು.

ಸಭೆಯಲ್ಲಿ 2023-2024ನೇ ವರ್ಷದ ಆಡಳಿತ ಮಂಡಳಿ ವರದಿ ಮಂಜೂರಾತಿ, 2023-2024ನೇ ವರ್ಷದ ಲೆಕ್ಕ ಪರಿಶೋಧನಾ ವರದಿ ಮಂಜೂರು, 2023-2024ನೇ ವರ್ಷದ ನಿವ್ವಳ ಲಾಭ ವಿಂಗಡಣೆ, 2023-2024ನೇ ವರ್ಷದಲ್ಲಿ ಆಯ-ವ್ಯಯಗಿಂತ ಜಾಸ್ತಿ ಖರ್ಚಾದ ಐಟಂಗಳ ಮಂಜೂರಾತಿ, 2024-25ನೇ ವರ್ಷದ ಅಂದಾಜು ಆಯ-ವ್ಯಯ ಪಟ್ಟಿಯ ಮಂಜೂರಾತಿ, 2024-25ನೇ ಸಾಲಿಗೆ ಬ್ಯಾಂಕಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕನನ್ನು ನೇಮಿಸುವ ಕುರಿತು, ಹಾಗೂ ಇತರ ವಿಷಯಗಳ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್‌ರವರು ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಹೆಚ್ ಜಗನ್ನಾಥ ಸಾಲಿಯಾನ್ ಸ್ವಾಗತಿಸಿ, ಬಿ.ಸಿ. ರೋಡು ಶಾಖೆಯ ಶಾಖಾ ವ್ಯವಸ್ಥಾಪಕರು ಶ್ರೀನಿಧಿ ಕುಡ್ವ ಪ್ರಾರ್ಥಿಸಿದರು. ಉಪಾಧ್ಯಕ್ಷ ಮೋಹನ್ ಕೆ.ಎಸ್. ವಂದಿಸಿ, ಮಹೇಶ್ ಕುಮಾರ್ ಎಸ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!