Tuesday, April 30, 2024
spot_imgspot_img
spot_imgspot_img

ಅತಿ ವೇಗದಲ್ಲಿ ರೈಲು ಚಲಿಸಿದರೂ ಒಂದು ಹನಿ ನೀರು ಚೆಲ್ಲಲಿಲ್ಲ-ಮೈಸೂರು ಬೆಂಗಳೂರು ರೈಲು ಮಾರ್ಗದ ಚಮತ್ಕಾರ!!

- Advertisement -G L Acharya panikkar
- Advertisement -

ಮೈಸೂರು(ನ.2): ರೈಲು ಅತ್ಯಂತ ವೇಗದಲ್ಲಿದ್ದರೂ ಕಂಪಾರ್ಟ್ ಮೆಂಟ್​ನ ಟೇಬಲ್ ಮೇಲಿಟ್ಟಿದ್ದ ಲೋಟದಿಂದ ಹನಿ ನೀರೂ ಹೊರಗೆ ಬೀಳದ ವಿಡಿಯೋ ಅನ್ನು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಹಂಚಿಕೊಂಡಿದ್ದು ಮೈಸೂರು- ಬೆಂಗಳೂರು ನಡುವಿನ ರೈಲ್ವೆ ಹಳಿಯ ಉತ್ತಮ ನಿರ್ವಹಣೆಯಿಂದಾಗಿ ಸಂಚಾರ ಎಷ್ಟು ಸಲೀಸಾಗಿದೆಯೆಂದರೆ ರೈಲು ಅತಿ ವೇಗದಲ್ಲಿದ್ದರೂ ಲೋಟದಲ್ಲಿದ್ದ ನೀರಿನ ಒಂದು ಹನಿಯೂ ಹೊರಬಿದ್ದಿಲ್ಲ ಎಂದಿದ್ದಾರೆ.

ಡಿಆರ್​ಎಂ ತಪಾಸಣೆ 3-4 ತಿಂಗಳಿಂದ ಬೆಂಗಳೂರು ಮತ್ತು ಮೈಸೂರು ರೈಲ್ವೆ ಟ್ರ್ಯಾಕ್​ನಲ್ಲಿ ಸ್ವಲ್ಪ ನಿರ್ವಹಣೆ ಮಾಡಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಬಲ್ಲಾಸ್ಟ್ ಇನ್ಸರ್ಷನ್, ಹಳಿಗಳ ಟ್ಯಾಂಪಿಂಗ್ ಹಾಗೂ ಎಂಬಾರ್ಕ್​ವೆುಂಟ್ ಸದೃಢಗೊಳಿಸುವುದೂ ಸೇರಿ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಡಿಆರ್​ಎಂ ಅಶೋಕ್​ಕುಮಾರ್ ವರ್ವ ಗುರುವಾರ ಗೋಲ್​ಗುಂಬಜ್ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣದಿಂದ ಮೈಸೂರು ರೈಲ್ವೆ ನಿಲ್ದಾಣದವರೆಗೂ ಟ್ರ್ಯಾಕ್ ಪರಿಶೀಲನೆ ನಡೆಸಿದ್ದರು.

ಬೆಂಗಳೂರಿನಲ್ಲಿಯೇ ಒಂದು ಲೋಟದಲ್ಲಿ ನೀರು ತುಂಬಿ ರೈಲಿನ ಕೊನೇ ಬೋಗಿಯಲ್ಲಿ ಇಟ್ಟಿದ್ದರು. ರೈಲು ಗಂಟೆಗೆ 100 ಕಿ.ಮೀ. ವೇಗದಲ್ಲಿ ಮೈಸೂರು ತಲುಪಿದರೂ ಒಂದು ಹನಿ ನೀರೂ ಚೆಲ್ಲಿರಲಿಲ್ಲ. ಇದನ್ನು ವಿಡಿಯೋ ಮಾಡಿ ರೈಲ್ವೆ ಸಚಿವರಿಗೆ ವರ್ಮ ವರದಿ ನೀಡಿದರು.

- Advertisement -

Related news

error: Content is protected !!