Friday, June 27, 2025
spot_imgspot_img
spot_imgspot_img

ಮಂಗಳಪದವು: ಹಿಂದೂ ಜಟ್ಕಾ ಕಟ್ ಕೋಳಿ ಮಾಂಸದ ಅಂಗಡಿ ತೆರವು ನೋಟೀಸು ಜಾರಿ ಹಿನ್ನಲೆ

- Advertisement -
- Advertisement -

ವೀರಕಂಭ ಗ್ರಾಮ ಪಂಚಾಯತ್‌ನ ಒಡೆದು ಆಳುವ ನೀತಿಯನ್ನು ವಿರೋಧಿಸಿದ ಹಿಂದೂ ಕಾರ್ಯಕರ್ತರು

ವೀರಕಂಬ ಪಂಚಾಯತ್‌ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ಹಿಂದೂ ಜಟ್ಕಾ ಕಟ್ ಕೋಳಿ ಮಾಂಸದ ಅಂಗಡಿಯನ್ನು ತೆರೆವು ಮಾಡಬೇಕು ಎಂದು ನೋಟೀಸು ಜಾರಿ ಮಾಡಿದ ಹಿನ್ನಲೆಯಲ್ಲಿ ಸ್ಥಳೀಯ ಹಿಂದೂ ಹೋರಾಟ ಸಮಿತಿಯ ಪ್ರಮುಖರು ವೀರಕಂಬ ಪಂಚಾಯತ್‌ ಪಿಡಿಒ ಅವರನ್ನು ಬೇಟಿ ಮಾಡಿ ವೀರಕಂಬ ಪಂಚಾಯತ್‌‌‌ ವ್ಯಾಪ್ತಿಗೆ ಬರುವ ಎಲ್ಲಾ ಅನದೀಕೃತ ಅಂಗಡಿಗಳಿಗೆ ತಕ್ಷಣ ನೋಟೀಸು ಜಾರಿ ಮಾಡಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಅದೆಷ್ಟೋ ಅಂಗಡಿಗಳು ಅನಧಿಕೃತವಾಗಿ ನಡೆಯುತ್ತಿದ್ದು, ಹಿಂದೂ ಜಟ್ಕ ಕೋಳಿ ಮಾಂಸದ ಅಂಗಡಿಗೆ ನೋಟೀಸು ಕೊಟ್ಟು ಒಡೆದು ಆಳುವ ನೀತಿ ಸ್ಪಷ್ಟ. ಹೊಸ ಸರಕಾರ ರಚನೆ ಆದ ನಂತರದಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ಹಿಂದೂ ಹೋರಾಟ ಸಮಿತಿಯ ಪ್ರಮುಖರು ಆರೋಪಿಸಿದರು. ಕಾನೂನು ಎಲ್ಲರಿಗೂ ಒಂದೇ ರೀತಿ ಇರಲಿ, ಭೇದಬಾವ ಮಾಡಿದರೆ ಸಹಿಸುವುದಿಲ್ಲ ಎಂದು ಹಿಂದೂ ಪ್ರಮುಖರು‌ ತಿಳಿಸಿದರು.

- Advertisement -

Related news

error: Content is protected !!