Tuesday, July 1, 2025
spot_imgspot_img
spot_imgspot_img

(ಅ.21- 23) ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರ ಮುಂಡ್ರಬೈಲು (ರಿ.) “ಪ್ರತಿಷ್ಠಾ ವಾರ್ಷಿಕೋತ್ಸವ” ಹಾಗೂ ಪರಿವಾರ ದೈವಗಳ ನೇಮೋತ್ಸವ

- Advertisement -
- Advertisement -

ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರ ಮುಂಡ್ರಬೈಲು ( ರಿ. ) ಆಶ್ರಯದಲ್ಲಿ ಶ್ರೀ ಗಣಪತಿ ನಂಬೂದಿರಿ ನೀಲೇಶ್ವರ ತಂತ್ರಿಗಳ ಆಚಾರ್ಯತ್ವದಲ್ಲಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಿಯ “ಪ್ರತಿಷ್ಠಾ ವಾರ್ಷಿಕೋತ್ಸವ” ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮವು ಅ. 21ನೇ ಸೋಮವಾರದಿಂದ ಅ. 23ನೇ ಬುಧವಾರದವರೆಗೆ ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರ ಮುಂಡ್ರಬೈಲು ಇಲ್ಲಿ ನಡೆಯಲಿದೆ.

ದಿನಾಂಕ 21-10-2024ನೇ ಸೋಮವಾರದಂದು ಸಂಜೆ ಗಂಟೆ 5:00ಕ್ಕೆ ತಂತ್ರಿಗಳ ಆಗಮನ, ಬಳಿಕ 5:30ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ರಾತ್ರಿ 6:30ಕ್ಕೆ ಸ್ಥಳೀಯ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:30ಕ್ಕೆ ದಿನೇಶ್ ಕೋಡಪದವು ಸಾರಥ್ಯದಲ್ಲಿ “ಯಕ್ಷತೆಲಿಕೆ” ಎಂಬ ಕಾರ್ಯಕ್ರಮ ನಡೆದು, ಬಳಿಕ 9:00ಕ್ಕೆ ಪ್ರಸಾದ ಭೋಜನ ನಡೆಯಲಿದೆ.

ದಿನಾಂಕ 22-10-2024ನೇ ಮಂಗಳವಾರದಂದು ಬೆಳಿಗ್ಗೆ 6:00 ಗಂಟೆಗೆ ಗಣಹೋಮ ನಡೆದ ಬಳಿಕ, 7:00ಕ್ಕೆ ನವಕ ಕಲಶ ಪೂಜೆ ನಡೆಯಲಿದೆ. ಬಳಿಕ 7:30ಕ್ಕೆ ನಾಗತಂಬಿಲ ನಡೆದು, ತದನಂತರ 8:00ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ. ಬಳಿಕ 9:30ಕ್ಕೆ ಮಹಾದೇವಿ ಭಜನಾ ಮಂಡಳಿ ಏಮಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆದು, 11:30ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ಗಂಟೆ 12:00ಕ್ಕೆ ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ ಗಂಟೆ 5:00ಕ್ಕೆ ದೈವಗಳ ಭಂಡಾರ ತೆಗೆದು ನಂತರ 7:00ಕ್ಕೆ ಕಲ್ಲುರ್ಟಿ, ಪಟ್ಟದ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8:30ಕ್ಕೆ ಪ್ರಸಾದ ಭೋಜನ ನಡೆಯಲಿದೆ.

ದಿನಾಂಕ 23-10-2024ನೇ ಬುಧವಾರದಂದು ಬೆಳಿಗ್ಗೆ ಗಂಟೆ 10:00ಕ್ಕೆ ಶ್ರೀ ದೇವಿಗೆ ವಿಶೇಷ ವಾರ್ಷಿಕ ಪೂಜೆ, ದೈವಗಳಿಗೆ ತಂಬಿಲ ಸೇವೆ ನಡೆದು ಬಳಿಕ, 11:30ಕ್ಕೆ ಗುಳಿಗನಿಗೆ ಕೋಳಿ ನೀಡುವ ಸೇವೆ ನಡೆಯಲಿದೆ. ಮಧ್ಯಾಹ್ನ ಗಂಟೆ 1:00ಕ್ಕೆ ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 8:00 ಗಂಟೆಗೆ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಲಿದೆ.

- Advertisement -

Related news

error: Content is protected !!