Sunday, June 29, 2025
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಅಪ್ಪೇರಿಪಾದೆಯಲ್ಲಿ ನಿರ್ಮಾಣವಾಗುತ್ತಿರುವ ಶೌಚ ತ್ಯಾಜ್ಯ ಘಟಕ (FSTP)

- Advertisement -
- Advertisement -

ನಿರ್ಮಾಣಕ್ಕೆ ಸ್ಥಳೀಯರಿಂದ ಆಕ್ಷೇಪ; ಹೋರಾಟದ ಎಚ್ಚರಿಕೆ…!

ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಅಪ್ಪೇರಿಪಾದೆ ಎಂಬಲ್ಲಿ ಸ.ನಂ 603/1ಎ2ಎ1 ರ ಸರಕಾರಿ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಶೌಚ ತ್ಯಾಜ್ಯ ಘಟಕ (FSTP) ಕ್ಕೆ ಸ್ಥಳೀಯ ವಾಸಿಗಳು ಅಶೋಕ್‌ ಕುಮಾರ್‌ ರೈ ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿ ದ.ಕ ಜಿಲ್ಲೆ ಮಂಗಳೂರು ಇವರಿಗೆ ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಅಪ್ಪೇರಿಪಾದೆ ಕಾಶಿಮಠ, ಬ್ರಾಣ ಪಾದೆ, ಕೊಪ್ಪಳ, ಕಳುವಾಜೆ ಪರಿಸರದ ನಾಗರಿಕರು ಆಕ್ಷೇಪಣೆ ಪತ್ರ ಸಲ್ಲಿಸಿರುತ್ತಾರೆ.

ವಿಟ್ಲ ಪಟ್ಟಣ ಪಂಚಾಯತ್‌‌ ವ್ಯಾಪ್ತಿಯ ಅಪ್ಪೇರಿಪಾದೆ, ಕಾಶಿಮಠ, ಬ್ರಾಣ ಪಾದೆ, ಕೊಪ್ಪಳ, ಕಳುವಾಜೆ ಪರಿಸರದಲ್ಲಿ ಅನೇಕ ವರ್ಷಗಳಿಂದ ಸುಮಾರು 230 ರಿಂದ 250 ರವರೆಗೆ ಮನೆಗಳಿದ್ದು, ಸುಮಾರು 700 ರಿಂದ 750 ಜನರು ವಾಸಮಾಡುವ ಜನವಸತಿ ಪ್ರದೇಶವಾಗಿರುತ್ತದೆ.

ಅಪ್ಪೇರಿಪಾದೆ ಎಂಬಲ್ಲಿ ಕಡೂರು-ಕಾಂಞಂಗಾಡು ಅಂತರ್‌‌‌ ರಾಜ್ಯ ಹೆದ್ದಾರಿಯ 50 ಮೀಟರ್‌‌‌ ದೂರದಲ್ಲೇ ರೈತ ಸಂಪರ್ಕ ಕೇಂದ್ರ ಇದ್ದು ಇದರ ಸಮೀಪದಲ್ಲಿಯೇ ಸ.ನಂ 603/1ಎ2ಎ1 ರ ಸರಕಾರಿ ಜಮೀನಿನಲ್ಲಿ ಶೌಚ ತ್ಯಾಜ್ಯ ಘಟಕ (FSTP) ನಿರ್ಮಾಣ ಮಾಡಲು ಜಮೀನಿನ ಸಮತಟ್ಟು ಮಾಡುತ್ತಿದ್ದು, ಈ ಕಾಮಗಾರಿಯನ್ನು ಸ್ಥಳಿಯರಿಗೆ ಯಾವುದೇ ಮಾಹಿತಿ ನೀಡದೇ ಏಕಪಕ್ಷೀಯವಾಗಿ ಪರಿಸರಕ್ಕೆ ಹಾನಿ ಉಂಟಾಗುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು,. ಈ ಕಾಮಗಾರಿಯ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ವಿಚಾರಿಸಿದಾಗ, ಉದ್ಯಾನವನ ಹಾಗೂ ಪಟ್ಟಣ ಪಂಚಾಯತ್‌ ಕಟ್ಟಡ ಪಂಚಾಯತ್‌ ಕಟ್ಟಡ ನಿರ್ಮಾಣ ಆಗುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ.

ಜನವಸತಿ ಪ್ರದೇಶದಲ್ಲಿ ಶೌಚ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಅದೇ ರೀತಿ ಸದ್ರಿ ಪ್ರದೇಶದಲ್ಲಿ ಸರಕಾರಿ ರೈತ ಸಂಪರ್ಕ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ವಿಟ್ಲ ಪಂಚಲಿಂಗೇಶ್ವರ ಜಾತ್ರೆಯ ಸಮಯ ಆಗಮಿಸಿವ ಮಲರಾಯಿ ಭಂಡಾರದ ವಿಶ್ರಮಿಸುವ ಕಟ್ಟೆ, ದೇವರ ಜಳಕಕ್ಕೆ ಬಂದು ನಿಲ್ಲುವ ಕಟ್ಟೆ, ದೇವರ ಜಳಕದ ಗುಂಡಿ, ಜನವಸತಿ ಪ್ರದೇಶ, ಅಂಗನವಾಡಿ ಕೇಂದ್ರ ವಾಣಿಜ್ಯ ಅಂಗಡಿ ಕಟ್ಟಡಗಳು, ಅಂತರ್ ರಾಜ್ಯ ಹೆದ್ದಾರಿಯ ಬಳಿಯಲ್ಲಿಯೇ ಸ್ದರಿ ಘಟಕ ನಿರ್ಮಾಣ ಆಗುವುದರಿಂದ ಪರಿಸರ ಹಾನಿ, ಆರೋಗ್ಯ ಹಾನಿ, ಸಾಂಕ್ರಾಮಿಕ ರೋಗದ ಭಾದೆ, ಪರಿಸರದಲ್ಲಿ ದುರ್ನಾತ ಬೀರುವ ಸಂಭವವಿದ್ದು, ಇದರಿಂದ ಜನವಸತಿ ಪ್ರದೇಶದಲ್ಲಿ ವಾಸವಿರುವ ಜನರಿಗೆ ತೊಂದರೆ ಆಗುವ ಸಂಭವವಿರುತ್ತದೆ.

ಆದುದರಿಂದ, ಅಪ್ಪೇರಿಪಾದೆ ಪ್ರದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಶೌಚ ತ್ಯಾಜ್ಯ ಘಟಕದ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು, ಹಾಗೆಯೇ ಸದ್ರಿ ಪರಿಸರವನ್ನು ಯಾವುದೇ ಜಮೀನನ್ನು ಸದ್ರಿ ಘಟಕ ನಿರ್ಮಾಣಕ್ಕೆ ಮೀಸಲು ಇಡುವುದಕ್ಕೆ ಊರಿನ ನಾಗರೀಕರ ಆಕ್ಷೇಪಣೆ ಇರುತ್ತದೆ. ಸದ್ರಿ ಜಮೀನು ಹೆದ್ದಾರಿಯ ಸಮೀಪವೇ ಇದ್ದು ಜನ ಸಾಮಾನ್ಯರಿಗೆ ಪ್ರಯೋಜನವಾಗುವ ಸರಕಾರಿ ಇಲಾಖೆಯ ನಿರ್ಮಾಣಕ್ಕೆ ಸದ್ರಿ ಜಮೀನನ್ನು ಕಾಯ್ದಿರಿಸಲು ಊರಿನ ನಾಗರೀಕರ ಯಾವುದೇ ಆಕ್ಷೇಪ ಇರುವುದಿಲ್ಲ.

ಆದುದರಿಂದ, ಸದ್ರಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸಲು ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸುವಂತೆ ಹಾಗೂ ಈ ಬಗ್ಗೆ ಈಗಾಗಲೇ ವಿಟ್ಲ ಪಟ್ಟಣ ಪಂಚಾಯತ್ ಗೆ ಲಿಖಿತ ಆಕ್ಷೇಪಣೆಯನ್ನು ಊರಿನ ನಾಗರೀಕರು ನೀಡಿದ್ದು, ಈ ಬಗ್ಗೆ ಯಾವುದೇ ಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್‌ನವರು ತೆಗೆದುಕೊಂಡಿರುವುದಿಲ್ಲ. ಆದುದರಿಂದ ತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ಕಾಮಾಗಾರಿಯನ್ನು ನಿಲ್ಲಿಸದಿದ್ದಲ್ಲಿ ಸ್ಥಳದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!