- Advertisement -
- Advertisement -


ವಿಟ್ಲ ಜೈನ ಬಸದಿ ಮುಂಬಾಗದಲ್ಲಿನ ಸರ್ಕಾರಿ ಪಶು ಚಿಕಿತ್ಸಾಲಯ ವಠಾರದಲ್ಲಿ ಹಾದುಹೋಗುವ ಇಕ್ಕಟ್ಟಾದ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಆರು ಲಕ್ಷ ಅನುದಾನ ಮಂಜೂರಾಗಿದ್ದು, ಇಂದು ಬೆಳಗ್ಗೆ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಪರಿಸರದ ವ್ಯಕ್ತಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಬಂದ ಜೆಸಿಬಿ ವಾಹನ ಪಶು ಚಿಕಿತ್ಸಾಲಯದ ಆವರಣ ಗೋಡೆಯನ್ನು ಕೆಡವಿ ಧ್ವಂಸ ಮಾಡಿದ ಘಟನೆ ವಿಟ್ಲದಲ್ಲಿ ನಡೆದಿತ್ತು.

ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯಿಂದ ಖಂಡನೆ ನಡೆದಿತ್ತು.ಇದೀಗ ಪಟ್ಟಣ ಪಂಚಾಯಿತ್ ನ ನಿರ್ದೇಶನದಂತೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಮೊದಲಿನ ರೀತಿಯಲ್ಲಿ ಕಟ್ಟಿಕೊಡಬೇಕೆಂಬ ಆದೇಶದಂತೆ ಸ್ಥಳೀಯ ನಿವಾಸಿಗಳು ಪಶು ಚಿಕಿತ್ಸಾಲಯದ ಆವರಣ ಗೋಡೆಯನ್ನು ಪರಿಸರದ ವ್ಯಕ್ತಿಗಳು ನಿರ್ಮಿಸಿ ಕೊಟ್ಟಿದ್ದರೆ.
- Advertisement -