Sunday, June 29, 2025
spot_imgspot_img
spot_imgspot_img

ವಿಟ್ಲ: ಸರಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸರಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯ ಟಾಟಾ ವರ್ಕ್‌‌ಶಾಪ್‌ ಕಟ್ಟಡದ ಮುಂಭಾಗ ತಡೆಗೋಡೆ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು, ಅಶೋಕ್‌ ಕುಮಾರ್‌ ರೈ ದೀಪ ಬೆಳಗಿಸಿ ನಂತರ ಗುದ್ದಲಿ ಪೂಜೆಯನ್ನು ನೆರವೇರಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ.ರಾಜರಾಮ್‌ ಮಾಜಿ ಅಧ್ಯಕ್ಷರು ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೇಸ್‌, ಎಂ ಎಸ್ ಮಹಮ್ಮದ್‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅಶ್ರಫ್‌ ವಿ ಕೆ ಸದಸ್ಯರು ಪಟ್ಟಣ ಪಂಚಾಯತ್‌ ವಿಟ್ಲ, ರಮನಾಥ ವಿಟ್ಲ ಮಾಜಿ ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್‌, ಪದ್ಮನಾಭ ಪೂಜಾರಿ ಸಣ್ಣಗುತ್ತು ಬ್ಲಾಕ್‌ ಅಧ್ಯಕ್ಷರು ವಿಟ್ಲ, ಶ್ರೀನಿವಾಸ ಶೆಟ್ಟಿ ನಾಮ ನಿರ್ದೇಶನ ಸದಸ್ಯರು ಪಟ್ಟಣ ಪಂಚಾಯತ್‌ ವಿಟ್ಲ, ಇಕ್ಬಾಲ್‌ ನಾಮಿನೇಟೆಡ್‌ ಸದಸ್ಯರು ವಿಟ್ಲ ಪ.ಪಂಚಾಯತ್‌, ಶ್ರೀಧರ ಶೆಟ್ಟಿ ಅಧ್ಯಕ್ಷರು ಜೇಸಿ ಶಾಲೆ ವಿಟ್ಲ, ಡೀಕಯ್ಯ ವಿಟ್ಲ ಸದಸ್ಯರು ಪಟ್ಟಣ ಪಂಚಾಯತ್‌ ವಿಟ್ಲ, ಸಿ.ಎಫ್‌ ಸಿಕ್ವೇರಾ, ಐಎಂಸಿ ಸದಸ್ಯರು ಸರಕಾರಿ ಐಟಿಐ ವಿಟ್ಲ, ಹರೀಶ್ ಇಂಜಿನಿಯರ್‌ ನಿರ್ಮಿತಿ ಕೇಂದ್ರ ಮಂಗಳೂರು, ರಾಹುಲ್‌ ಗುತ್ತಿಗೆದಾರರು, ರಾಜರಾಂ ಉದ್ದಿಮೆದಾರರು ಇಕೋಬ್ಲಿಸ್‌ ಬಲಿಪಗುಳಿ ಸೇರಿದಂತೆ ಸಂಸ್ಥೆಯ ಉಪನ್ಯಾಸಕವರ್ಗ, ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!