Sunday, June 29, 2025
spot_imgspot_img
spot_imgspot_img

ಮಾಣಿ: ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಕಾರು ಡಿಕ್ಕಿ ಚಿಕಿತ್ಸೆ ಫಲಕಾರಿಯಾಗದೆ ಪೇರಮೊಗರು ನಿವಾಸಿ ಉಸ್ಮಾನ್ ಮೃತ್ಯು

- Advertisement -
- Advertisement -

ಮಾಣಿ: ಗಡಿಯರ ಪೇರಮೊಗರು ಬಳಿ ಕಾರು ಆಕ್ಟಿವಾ ನಡುವೆ ಅಪಘಾತದಲ್ಲಿ ಆಕ್ಟಿವಾ ಸವಾರ ಉಸ್ಮಾನ್ ಮೃತಪಟ್ಟಿದ್ದಾರೆ.

ಕೆದಿಲ ಗ್ರಾಮದ ಕುದ್ಮಾನ್ ನಿವಾಸಿಯಾಗಿರುವ ಅಬ್ಬಾಸ್ ರವರ ಮಗ ಪೈಂಟರ್ ಉದ್ಯೋಗ ಉಸ್ಮಾನ್ (ಚಪ್ಪಿ ) (24)ಯುವಕ ಪೇರಮೊಗರು ಸಮೀಪದದ್ವಿಚಕ್ರ ಗಾಡಿಯನ್ನು ನಿಲ್ಲಿಸಿ ಅಂಗಡಿಯಿಂದ ಸಾಮಾನು ತರಲು ಹೋದ ಸಹಸವಾರನನ್ನು ಕಾಯುತ್ತಾ ನಿಂತಿದ ಯುವಕನಿಗೆ ಉಪ್ಪಿನಂಗಡಿ ಕಡೆಯಿಂದ ಬಂದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಹಾಗೂ ಸವಾರನನ್ನು ಚರಂಡಿಗೆ ಎಸೆದು ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ. .ಗಂಭೀರ ಗಾಯಗೊಂಡಿದ್ದ ಉಸ್ಮಾನ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!