Sunday, June 29, 2025
spot_imgspot_img
spot_imgspot_img

ದಾಸನ ಜೊತೆ ಇದ್ದ ಸಿಬ್ಬಂದಿಗಳಿಗೆ ಗೇಟ್ ಪಾಸ್; ದರ್ಶನ್ ಮೇಲೆ ವಿಜಯಲಕ್ಷ್ಮಿ ಹದ್ದಿನ ಕಣ್ಣು..!

- Advertisement -
- Advertisement -

ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ 5 ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಹೊರಗೆ ಐಷಾರಾಮಿಯಾಗಿ ಜೀವನ ಕಂಡ ದರ್ಶನ್, ಜೈಲಲ್ಲಿ ನಿಲ್ಲೋಕು, ಕೂರೋಕು ಆಗದೆ ಪರದಾಡಿದ್ರು. ಆಗ ಪತಿ ದರ್ಶನ್​ ಬೆಂಬಲಕ್ಕೆ ನಿಂತವರೇ ಪತ್ನಿ ವಿಜಯಲಕ್ಷ್ಮಿ. ಪರಸ್ತ್ರೀ ವಿಚಾರಕ್ಕೆ ಗಂಡ ಜೈಲು ಪಾಲಾಗಿದ್ದರು, ಗಂಡನ ಪರ ಕಾನೂನು ಹೋರಾಟ ಮಾಡಿದರು. ಪ್ರತಿ ವಾರ ಜೈಲಿಗೆ ಹೋಗಿ ಪತಿಯ ಯೋಗಕ್ಷೇಮ ವಿಚಾರಿಸಿದರು.

ಕೋರ್ಟು-ಕಚೇರಿ ಅಲೆದು, ಗುಡಿ-ಗೋಪುರ ಸುತ್ತಿ ಗಂಡನಿಗಾಗಿ ಹರಕೆ ಹೊತ್ತರು. ಕೊನೆಗೂ ಕಾನೂನು ಹೋರಾಟದಲ್ಲಿ ಗೆದ್ದು ದರ್ಶನ್​ ಅವರನ್ನು ಜೈಲಿಂದ ಹೊರಗೆ ತಂದರು ಇದು ವಿಜಯಲಕ್ಷ್ಮಿ ಗೆಲುವೇ ಆಗಿತ್ತು. ದರ್ಶನ್ ಜೈಲಿಂದ ಬಂದ ಮೇಲೆ ಪತ್ನಿ ವಿಜಯಲಕ್ಷ್ಮಿ ತನ್ನ ಗಂಡನ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲ್ಲವನ್ನೂ ಕಂಟ್ರೋಲ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

ಕೊಲೆ ಕೇಸ್​ ಮೇಲೆ ನಟ ದರ್ಶನ್ ಜೈಲು ಸೇರಿದ ಮೇಲೆ ಮುಗೀತು ಈ ನಟನ ಸಿನಿ ಕೆರಿಯರ್ ಎನ್ನುವ ಮಾತು ಕೇಳಿ ಬಂದಿತ್ತು. ಜೈಲಿಂದ ಹೊರಗೆ ಬಂದ ಮೇಲೆ ಅಭಿಮಾನಿಗಳು ದರ್ಶನ್​ನನ್ನು ಒಪ್ಪಿಕೊಂಡ ರೀತಿ ನೋಡಿ ಅನೇಕರು ಶಾಕ್ ಆಗಿದ್ದಾರೆ. ಅದೇ ಅಭಿಮಾನ, ಅದೇ ಕ್ರೇಜ್​ ಈಗಲೂ ಇದೆ. ಇದನ್ನೆಲ್ಲಾ ನೋಡಿದ ವಿಜಯಲಕ್ಷ್ಮಿ ಗಂಡನ ತಪ್ಪು ಮಾಡದಂತೆ ತಡೆಯಲು ಆತನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!