- Advertisement -
- Advertisement -



ಬೈರಂಪಳ್ಳಿ: ಗೆಳೆಯರ ಬಳಗ (ರಿ) ಪೆರ್ಡೂರು ಇವರ ವತಿಯಿಂದ, ಸಂಸ್ಥೆಯ ಗೌರವ ಸಲಹೆಗಾರರಾದ ಸತೀಶ್ ಶೆಟ್ಟಿ ಕುತ್ಯಾರು ಬೀಡು ಇವರ ಮಾರ್ಗದರ್ಶನದಲ್ಲಿ 2024-25 ರ 2ನೇ ಯೋಜನೆಯ ಅಂಗವಾಗಿ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯಾರು ನಿವಾಸಿ ಸುಂದರ ಶೇರ್ವೆಗಾರ್ ಇವರ ಮನೆಯನ್ನು ರೂಪಾಯಿ 1.50 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಕೊಡಲಾಯಿತು.
ಯೋಜನೆಯ ಹಸ್ತಾoತರ ಕಾರ್ಯಕ್ರಮ ಮಾ.5 ರಂದು ನಡೆಯಿತು. ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ನಿತಿನ್ ಮೆಂಡನ್, ಸ್ಥಾಪಕ ಅಧ್ಯಕ್ಷರು ಸತೀಶ್ ಪಿ. ಗೌರವ ಅಧ್ಯಕ್ಷರು ಸತೀಶ್, ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಖಜಾಂಚಿ ನಿಶ್ವಲ್ ಶೆಟ್ಟಿ, ಸಂಸ್ಥೆಯ ಸದಸ್ಯರು,ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ಪ್ರಸಾದ್ ಮಲ್ಯ ಮಾಜಿ ಅಧ್ಯಕ್ಷರು ಶ್ರೀ ಜಿಯಾನಂದ ಹೆಗ್ಡೆ, ಸದಸ್ಯೆ ಶ್ರೀಮತಿ ಸಚೇತಾ ರಾವ್, ಮುಂತಾದವರು ಉಪಸ್ಥಿತರಿದ್ದರು.
- Advertisement -