- Advertisement -
- Advertisement -
ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ಸೂರಿಕುಮೇರು ಬ್ರಾಂಚ್ ವತಿಯಿಂದ ನವೆಂಬರ್ 17 ಮಂಗಳವಾರ ಯೂಸುಫ್ ಹಾಜಿಯವರ ದಾರುಲ್ ಬರಕಾ ದಲ್ಲಿ ತಾಜುಲ್ ಉಲಮಾ ಆಂಡ್ ನೇರ್ಚೆ ನಡೆಸಲಾಯಿತು.
ತಹ್ಲೀಲ್ ಮಜ್ಲಿಸ್,ತಾಜುಲ್ ಉಲಮಾ ಮೌಲಿದ್,ದುಆ ಕಾರ್ಯಕ್ರಮ ತಬರ್ರುಕ್ ವಿತರಣೆ ನಡೆಸಲಾಯಿತು.ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ನೇತೃತ್ವ ವಹಿಸಿ ದುಆ ನಡೆಸಿಕೊಟ್ಟರು. ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ,ಇಬ್ರಾಹಿಂ ಸೂರಿಕುಮೇರು, ಅಬ್ದುಲ್ ಫತ್ತಾಹ್ ಹಳೀರ,ಇಮ್ರಾನ್ ಸೂರಿಕುಮೇರು,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಜಮಾಲ್ ಮಾಣಿ,ಅಬ್ದುಲ್ ಖಾದರ್ ಬರಿಮಾರ್,ಮುಂತಾದ ಗಣ್ಯರು ಉಪಸ್ಥಿತರಿದ್ದರು. ಬ್ರಾಂಚ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು ಹಾಗೂ ಧನ್ಯವಾದಗೈದರು.
- Advertisement -